ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಬಿ.ಎಸ್.ಎನ್.ಎಲ್. ಮುಖ್ಯ ಕಚೇರಿ ಮುಂದೆ ಆಲ್ ಯೂನಿಯನ್ ಆಂಡ್ ಅಸೋಸಿಯೇಷನ್ ಆಫ್ ಬಿಎಸ್ಎನ್ಎಲ್ (ಎಯುಎಬಿ)ದಿಂದ ಬುಧವಾರ ಪ್ರತಿಭಟನೆ ಮಾಡಲಾಯಿತು.
ಬೇಡಿಕೆಗಳೇನು?
- ಬಿಟಿಎಸ್ ಅಪ್ ಗ್ರೇಡ್ ಮಾಡುವ ಮೂಲಕ 4 ಜಿ ಸೇವೆ ತಕ್ಷಣ ಆರಂಭಿಸಬೇಕು
- 5 ಜಿ ಸೇವೆ ಆರಂಭಿಸುವತ್ತ ಗಮನಹರಿಸಬೇಕು.
- 2021ರ ಜೂನ್ ತಿಂಗಳ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು.
- ಮಾಸಿಕ ಸರಿಯಾದ ಸಮಯಕ್ಕೆ ವೇತನ ಮಂಜೂರು ಮಾಡಬೇಕು
- ಬಿ.ಎಸ್.ಎನ್.ಎಲ್. ಎಲ್ಲ ಟವರ್ ಉನ್ನತೀಕರಿಸಬೇಕು. ಯಾವುದೇ ಕಾರಣಕ್ಕೂ ಇದಕ್ಕೆ ಆರ್ಥಿಕ ಕಾರಣ ನೀಡಬಾರದು.
- ಉನ್ನತೀಕರಣಕ್ಕೆ 39 ಸಾವಿರ ಕೋಟಿ ರೂಪಾಯಿ ನೀಡಬೇಕು. ಬಿ.ಎಸ್.ಎನ್.ಎಲ್. ಸಾಲದ ಹಣವನ್ನು ಗಳಿಕೆಯ ಮೂಲಕ ಹೊಂದಿಸಿಕೊಡಬೇಕು
- ವೇತನ ಪರಿಷ್ಕರಣೆ ಹಾಗೂ ಪಿಂಚಣಿ ಪರಿಷ್ಕರಣೆ ಮಾಡಬೇಕು.
- ಎಫ್.ಟಿ.ಟಿ.ಎಚ್ ಸೇವೆಯ ಗುಣಮಟ್ಟ ಸುಧಾರಿಸಲು ತ್ವರಿತ ಕ್ರಮಕೈಗೊಳ್ಳಬೇಕು. ಪ್ರಸರಣ ಜಾಲಗಳನ್ನು ಬಲಪಡಿಸಬೇಕು.
ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಲೋಹಿತ್, ಶಿವಶಂಕರ್ ಜಾಲಿಹಾಳ, ರಾಜು, ಸುನೀಲ್ ಕುಮಾರ್, ಕುನಾಲ್ ಕುಮಾರ್ ಉಪಸ್ಥಿತರಿದ್ದರು.
https://www.suddikanaja.com/2021/01/25/dial-112-launched-by-shivamogga-police-department/