ಸುದ್ದಿ ಕಣಜ.ಕಾಂ
ಸಾಗರ: ತಾಲೂಕಿನ ಅನಂತಪುರ ಸಮೀಪದ ಕಾಸ್ಬಾಡಿ ಕೆರೆಗೆ ಕೆ.ಎಸ್.ಆರ್.ಟಿ.ಸಿ ಬಸ್ ಶುಕ್ರವಾರ ಬೆಳಗ್ಗೆ ಉರುಳಿ ಬಿದ್ದಿದ್ದು, ಅದೃಷ್ಟವಷಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.
https://www.suddikanaja.com/2021/06/19/smart-city-works-in-shivamogga/
ಘಟನೆಯಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಶಿವಮೊಗ್ಗ ಮೂಲದ ದೀಪಕ್, ಶಬರೀಶ್ ಎಂಬುವವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗಾಗಿ ಮೆಗ್ಗಾನ್ಗೆ ದಾಖಲಿಸಲಾಗಿದೆ.
ಸಾಗರದಿಂದ ದಾವಣಗೆರೆಗೆ ತೆರಳುತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಸುಮಾರು 24-28 ಜನ ಪ್ರಯಾಣಿಕರಿದ್ದರು. ಕಾಸ್ಬಾಡಿ ಕೆರೆಯ ಇಕ್ಕಟ್ಟಾದ ಜಾಗದಲ್ಲಿ ಬೈಕ್ ಬಂದಿದ್ದು, ಅದಕ್ಕೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋದಾಗ ಬಸ್ ಕೆರೆಗೆ ಉರುಳಿದೆ.
READ | ಬಾಲಕಿ ರೇಪ್, ಹಣ್ಣಿನ ವ್ಯಾಪಾರಿ ಅರೆಸ್ಟ್, ಈತನ ಮೇಲೆ ದಾಖಲಾಯ್ತು ಮೂರು ಕೇಸ್
ಶಾಲೆ, ಕಾಲೇಜುಗಳು ಆರಂಭವಾಗಿದ್ದು ಬಸ್ಸಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳೇ ಇದ್ದರು ಎನ್ನಲಾಗಿದೆ. ಅದೃಷ್ಟವಷಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಪೊಲೀಸರು, ಅಗ್ನಿ ಶಾಮಕ ದಳದಿಂದ ರಕ್ಷಣಾ ಕಾರ್ಯ | ಘಟನೆಯ ಬಗ್ಗೆ ಮಾಹಿತಿ ಲಭಿಸಿದ್ದೇ ಸಾಗರ ಡಿವೈಎಸ್ಪಿ ವಿನಾಯಕ್ ಶೆಟಗೇರಿ, ಎ.ಎಸ್.ಐ. ಹನುಮಂತಪ್ಪ, ಶಿವಕುಮಾರ್ ಹಾಗೂ ಅಗ್ನಿಶಾಮಕದ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಿಟಕಿ, ಬಾಗಿಲುಗಳ ಮೂಲಕ ಬಸ್ಸಿನಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ.
https://www.suddikanaja.com/2020/11/14/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%b0%e0%b2%b8%e0%b3%8d%e0%b2%a4%e0%b3%86-%e0%b2%85%e0%b2%aa%e0%b2%98%e0%b2%be%e0%b2%a4/