ಸುದ್ದಿ ಕಣಜ.ಕಾಂ
ಭದ್ರಾವತಿ: ಭದ್ರಾವತಿ ತಹಸೀಲ್ದಾರ್ ಆಗಿದ್ದ ಜಿ.ಸಂತೋಷ್ ಕುಮಾರ್ ಅವರನ್ನು ಏಕಾಏಕಿ ಚಿತ್ರದುರ್ಗಕ್ಕೆ ವರ್ಗಾವಣೆ ಮಾಡಲಾಗಿದ್ದು, ಈ ಸ್ಥಾನಕ್ಕೆ ಆರ್.ಪ್ರದೀಪ್ ಅವರನ್ನು ನಿಯೋಜಿಸಲಾಗಿದೆ.
ಗ್ರೇಡ್ 1 ತಹಸೀಲ್ದಾರ್ ಆಗಿದ್ದ ಸಂತೋಷ್ ಅವರು ಕಳೆದ ವರ್ಷ ನವೆಂಬರ್ ನಲ್ಲಷ್ಟೇ ಅಧಿಕಾರ ಸ್ವೀಕರಿಸಿದ್ದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಪುರಸಭೆ ತಹಸೀಲ್ದಾರ್ ಆಗಿದ್ದ ಪ್ರದೀಪ್ ಅವರನ್ನು ನೇಮಕ ಮಾಡಲಾಗಿದ್ದು, ಈ ಹಿಂದೆ ಶಿವಮೊಗ್ಗ ಡಿಸಿ ಕಚೇರಿ ಮತ್ತು ನಾಡಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.