ಸುದ್ದಿ ಕಣಜ.ಕಾಂ
ಸಾಗರ: ಮೈಸೂರು- ತಾಳಗುಪ್ಪ ರೈಲಿಗೆ ಸಿಲುಕಿ ಯುವಕನೊಬ್ಬ ಮೃತಪಟ್ಟಿದ್ದಾನೆ.
ತಾಲೂಕಿನ ಗುಡ್ಡೆಕೌತಿ ಸಮೀಪ ಗುರುವಾರ ಮಧ್ಯಾಹ್ನ ಬೆಳಗಾವಿ ಮೂಲದ ಈಶ್ವರ್ ನಾಯ್ಕ್ (36) ಮೃತ ದುರ್ದೈವಿ. ಒಂದು ಕಾಲಿನ ಪಾದ ತುಂಡಾಗಿದ್ದು, ದೇಹ ಮತ್ತು ತಲೆಯ ಭಾಗ ಸಂಪೂರ್ಣ ಬೇರ್ಪಟ್ಟಿದೆ.
ಈಶ್ವರ್ ನಾಯ್ಕ್ ಅವರು ಬಿ.ಎಚ್.ರಸ್ತೆಯ ಬಸ್ ನಿಲ್ದಾಣ ಸಮೀಪ ನಂದಿನಿ ಪಾರ್ಲರ್ ನಡೆಸುತಿದ್ದ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.