ಸುದ್ದಿ ಕಣಜ.ಕಾಂ
ಶಿವಮೊಗ್ಗ: ತಾಲೂಕಿನ ಕೂಡ್ಲಿಗೆರೆ 66/11 ಕೆವಿ ವಿದ್ಯುತ್ ವಿತರಣೆ ಕೇಂದ್ರದ ವ್ಯಾಪ್ತಿಯಲ್ಲಿ ದುರಸ್ತಿ ಕಾರ್ಯ ಇರುವುದರಿಂದ ಜುಲೈ 11 ಮತ್ತು 12ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
11ರಂದು ಕೂಡ್ಲಿಗೆರೆ, ಆಟಿಗೆರೆ ಕ್ಯಾಂಪ್, ಕಲ್ಪನಹಳ್ಳಿ, ಹೊಸಹಳ್ಳಿ, ಕುಮರಿ ನಾರಾಯಣಪುರ, ಸೀತಾರಾಮಪುರ, ಅತ್ತಿಗುಂದ, ಬಸಲೀಕಟ್ಟೆ, ರೆಡ್ಡಿಕ್ಯಾಂಪ್, ಅರಳಿಹಳ್ಳಿ, ತಿಮ್ಲಾಪುರ, ಜಯನಗರ, ಕಾಗೇಹಳ್ಳಿ, ಸಂಜೀವನಗರ, ದೇವರಹಳ್ಳಿ, ಗುಡ್ಡದನೇರಳೇಕೆರೆ, ಕೋಮಾರನಹಳ್ಳಿ, ಬಂಡಿಗುಡ್ಡ, ಬದೇನಹಾಳ್, ಉದಯನಗರ, ಬೆಳ್ಳಿಗೆರೆ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
12ರಂದು ಹೊಸಸೇತುವೆ ರಸ್ತೆ, ಸಿದ್ಧಾರೂಢನಗರ, ಕನಕನಗರ, ಶಂಕರಮಠ, ಖಾಜಿಮೊಹಲ್ಲಾ, ಕೆ.ಎಸ್.ಆರ್.ಟಿ.ಸಿ ಡಿಪೋ ರಸ್ತೆ ಸುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ. ಸಾರ್ವಜನಿಕರು ಸಹಕರಿಸಬೇಕು ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ಕೋರಲಾಗಿದೆ.