ಸುದ್ದಿ ಕಣಜ.ಕಾಂ | DISTRICT | POLITICS
ಶಿವಮೊಗ್ಗ: ನಗರದ ರೈಲ್ವೆ ನಿಲ್ದಾಣದಲ್ಲಿ ರೈಲು ತಡೆಗೆ ಮುಂದಾದ ಮೂವತ್ತಕ್ಕೂ ಹೆಚ್ಚು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಗುರುವಾರ ಬಂಧಿಸಿ, ಬಿಡುಗಡೆ ಮಾಡಲಾಯಿತು.
https://www.suddikanaja.com/2021/07/19/suddi-kanaja-impact/
ರಾಷ್ಟ್ರೀಯ ಹಣ ಗಳಿಕೆ ನೀತಿ(ಎನ್.ಎಂ.ಪಿ) ಯೋಜನೆ ಅಡಿ ದೇಶದ ಆರು ಲಕ್ಷ ರೂಪಾಯಿ ಕೋಟಿ ಆಸ್ತಿಯನ್ನು ಖಾಸಗಿ ಒಡೆತನಕ್ಕೆ ಮಾರಾಟ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ ಮಾಡಲಾಯಿತು.
ದೇಶದಲ್ಲಿ ಅಚ್ಛೆ ದಿನ್ ತರುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರ ದೇಶದ ಸಾರ್ವಜನಿಕ ವಲಯದ ಆಸ್ತಿಗಳನ್ನು ರಾಷ್ಟ್ರೀಯ ಹಣ ಗಳಿಕೆಯ ನೀತಿ ಅಡಿಯಲ್ಲಿ ಸುಮಾರು 6 ಲಕ್ಷ ಕೋಟಿಯ ಆಸ್ತಿಯನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಮಾರಾಟ ಮಾಡಲು ಹುನ್ನಾರ ನಡೆಸಿದೆ ಎಂದು ಕಾರ್ಯಕರ್ತರು ಆರೋಪಿಸಿದರು.
ಈಗಾಗಲೇ ಎನ್.ಎಂ.ಪಿ. ಅಡಿಯಲ್ಲಿ 26,700ರಷ್ಟು ರಾಷ್ಟ್ರೀಯ ಹೆದ್ದಾರಿಗಳನ್ನು 150 ರೈಲು, 400 ರೈಲ್ವೆ ಸ್ಟೇಷನ್, 25 ವಿಮಾನ ನಿಲ್ದಾಣ, 9 ಬಂದರುಗಳು, ಎರಡು ರಾಷ್ಟ್ರೀಯ ಕ್ರೀಡಾಂಗಣಗಳು, ವಿದ್ಯುತ್ ಘಟಕಗಳು, ಟೆಲಿಕಾಂ ನೆಟ್ವರ್ಕ್ ಗಳು ಹೀಗೆ 13 ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡಿ ಅದಾನಿ, ಅಂಬಾನಿ ಅವರಂತಹ ಕಾಪೆರ್Çರೇಟ್ ಕಂಪೆನಿಗಳಿಗೆ ದೇಶದ ಜನರನ್ನು ಅಡಿಯಾಳಾಗಿ ಮಾಡಲು ಹೊರಟಿರುವುದು ಬಿಜೆಪಿ ಸರ್ಕಾರದ ಸರ್ವಾಧಿಕಾರಿ, ಜನ ವಿರೋಧಿ ನೀತಿಯ ಎದ್ದು ಕಾಣುತ್ತದೆ. ಕೂಡಲೇ ರಾಷ್ಟ್ರಪತಿಗಳು ಇಂತಹ ದೇಶ ವಿರೋಧಿ ಯೋಜನೆಗಳಿಗೆ ಕಡಿವಾಣ ಹಾಕಿ ಕಾರ್ಪೊರೇಟ್ ಕಂಪೆನಿಗಳಿಗೆ ಶಾಮೀಲಾಗಿರುವ ಇಂತಹ ದಲ್ಲಾಳಿ ಹಾಗೂ ದುರಾಳತನದ ಬಿಜೆಪಿ ಸರ್ಕಾರವನ್ನು ವಜಾ ಮಾಡಬೇಕೆಂದು ಯುವ ಕಾಂಗ್ರೆಸ್ ಆಗ್ರಹಿಸುತ್ತದೆ.
https://www.suddikanaja.com/2021/08/05/congress-protest/
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನ ಕುಮಾರ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಗಿರೀಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ..ರಂಗನಾಥ್, ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಪಾಲಿಕೆ ಸದಸ್ಯ ಎಚ್.ಸಿ. ಯೋಗೇಶ್, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಲೋಕೇಶ್, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಇ.ಟಿ. ನಿತೀನ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಎಸ್.ಕುಮರೇಶ್, ಪಕ್ಷದ ಮುಖಂಡರಾದ ಆರ್.ಕಿರಣ್ ಟಿ.ವಿ.ರಂಜಿತ್, ರಂಗೇಗೌಡ, ಎಸ್.ತಂಗರಾಜ್, ಸುವರ್ಣ ನಾಗರಾಜ್, ಎನ್.ಸಿ.ಟಿ.ಯು ಮಹಿಳಾ ಅಧ್ಯಕ್ಷೆ ಕವಿತಾ ರಾಘವೇಂದ್ರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶಶಿಕುಮಾರ್ ಸಿರಿಗೆರೆ, ಜಿಲ್ಲಾ ಪದಾಧಿಕಾರಿಗಳಾದ ಎಂ.ರಾಹುಲ್, ಕಲೀಮ್ ಸಿರಿಗೆರೆ, ಅರುಣ್ ನವುಲೆ, ನಿಖಿಲ್ ಮೂರ್ತಿ, ಗೋಪಿ ಚೌಕಿ, ದೇವರಾಜ್, ಸಚಿನ್ ಸಿಂದೆ, ಸುಹಾಸ್ ಗೌಡ, ಕೆ.ಎಲ್. ಪವನ್, ರಾಕೇಶ್, ಚಿನ್ಮಯ್ ರಾಹುಲ್ ಸೀಗೆಹಟ್ಟಿ, ಅಕ್ಬರ್, ಶಾರುಖ್, ಸೈಫುಲ್ಲಾ, ನಂದನ್ ಕಾರ್ಯಕರ್ತರು ಪಾಲ್ಗೊಂಡಿದ್ದರು.
https://www.suddikanaja.com/2021/07/22/national-highway-in-worst-condition-which-connect-through-western-ghat/