ಸುದ್ದಿ ಕಣಜ.ಕಾಂ | KARNATAKA | ARECA NUT
ಶಿವಮೊಗ್ಗ: ಅಡಿಕೆ ಬೆಲೆಯಲ್ಲಿ ಏರಿಕೆಯಾಗಿದ್ದು, ಬೆಳೆಗಾರರು ಖುಷಿಯಲ್ಲಿದ್ದಾರೆ. ಮಾರುಕಟ್ಟೆಯಲ್ಲಿ ಗುರುವಾರ ಕ್ವಿಂಟಾಲ್ ಅಡಿಕೆಗೆ ಮಾದರಿ ದರ 47,956 ಇದ್ದು, ಕನಿಷ್ಠ 45,199 ಹಾಗೂ ಗರಿಷ್ಠ 48,029 ರೂಪಾಯಿ ಇದೆ.
https://www.suddikanaja.com/2020/12/21/health-insurance-to-memcos-members-shivamogga/
ಒಂದು ಕ್ವಿಂಟಾಲ್ ರಾಶಿ ಅಡಿಕೆಯ ಬೆಲೆ 38-40 ಸಾವಿರ ರೂಪಾಯಿ ಇತ್ತು. ಆದರೆ, ಬೆಲೆ ಮೇಲ್ಮುಖವಾಗಿ ಸಾಗುತ್ತಿದೆ. ಇದೊಂದು ಆಶಾದಾಯ ಬೆಳವಣಿಗೆಯಾಗಿದೆ.
2020ರ ಫೆಬ್ರವರಿಯಲ್ಲಿ 39 ಸಾವಿರ ರೂಪಾಯಿ ಇದ್ದ ಅಡಿಕೆ ದರ ಕಾಲಕ್ರಮೇಣ ಏರಿಕೆಯಾಗಿ 42-43 ಸಾವಿರಕ್ಕೆ ತಲುಪಿತ್ತು. ನಂತರ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರಗೊಂಡು ಹಾಗೆಯೇ ಮುಂದುವರಿದಿದೆ. ಆದರೆ, 2021ರ ಆಗಸ್ಟ್ ತಿಂಗಳಿನಲ್ಲಿ ಬೆಲೆ ಜಿಗಿತ ಕಂಡಿದೆ.
ಆಗಸ್ಟ್ ತಿಂಗಳ ಅಡಿಕೆ ದರ
ಅಡಿಕೆಯ ರಾಶಿಯ ಗರಿಷ್ಠ ಬೆಲೆ ಆಗಸ್ಟ್ 10ರಂದು 44,099, 23ರಂದು 46,599, 24ರಂದು 47,500, 25ರಂದು 47,700 ಹಾಗೂ 26ರಂದು 48,029 ರೂಪಾಯಿಗೆ ತಲುಪಿದೆ. ಈ ಭರಾಟೆ ಮುಂದುವರಿಯುವ ಸಾಧ್ಯತೆ ಇದೆ.
https://www.suddikanaja.com/2021/07/27/nsui-protest-against-fuel-price-hike/
ಅಡಿಕೆ ಬೆಲೆ ಏರಿಕೆಗೆ ಕಾರಣಗಳೇನು?
- ಮಾರುಕಟ್ಟೆಗೆ ಇಷ್ಟೊತ್ತಿಗಾಗಲೇ ಹೊಸ ಅಡಿಕೆ ಲಗ್ಗೆ ಇಡಬೇಕಿತ್ತು. ಆದರೆ, ಇದುವರೆಗೆ ಬಂದಿಲ್ಲ. ಮಳೆಯಿಂದಾಗಿ ಕೊಯ್ಲು ಸಾಧ್ಯವಾಗದೇ ಇರುವುದರಿಂದ ಸಂಸ್ಕರಣೆ ಕೂಡ ಆಗಿಲ್ಲ. ಹೀಗಾಗಿ, ಎಲ್ಲ ಕೆಲಸಗಳು ನಿಧಾನಗೊಂಡು ಮಾರುಕಟ್ಟೆಗೆ ಇದುವರೆಗೆ ಹೊಸ ಅಡಿಕೆ ಬಂದಿಲ್ಲ. ಇದರಿಂದಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಪೂರೈಕೆಯ ನಡುವೆ ಕಂದಕ ಉಂಟಾಗಿದೆ.
- ಮಲೇಷಿಯಾ, ಇಂಡೋನೇಷಿಯಾದಿಂದ ಗುಟ್ಕಾ ಕಂಪೆನಿಗಳು ಅಡಿಕೆ ಆಮದು ಮಾಡಿಕೊಳ್ಳುತ್ತಿದ್ದವು. ಆದರೆ, ಪ್ರಸ್ತುತ ಗಡಿಗಳು ಬಂದ್ ಮಾಡಿದ್ದು, ಪ್ರವೇಶಕ್ಕೆ ಅವಕಾಶವಿಲ್ಲ. ಇದರಿಂದಾಗಿ, ಹೊರ ದೇಶದಿಂದ ಬರುವ ಅಡಿಕೆ ಆಮದು ಮಾಡಿಕೊಳ್ಳಲಾಗದೇ ಗುಟ್ಕಾ ಕಂಪೆನಿಗಳು ಕರ್ನಾಟಕದ ಅಡಿಕೆಯ ಮೇಲೆ ಅನಿವಾರ್ಯವಾಗಿ ಅವಲಂಬನೆ ಆಗುವಂತಾಗಿದೆ.
- ಸಂಘಟಿತ ನಿರ್ಣಯ ಇಲ್ಲದಿದ್ದರೂ ಅಡಿಕೆ ಮಾರುಕಟ್ಟೆ ಬೆಳೆಗಾರರ ನಿಯಂತ್ರಣದಲ್ಲಿದೆ. ಹೀಗಾಗಿ, ಕೃತಕ ಅಭಾವ ಉಂಟಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಪೈಪೋಟಿ ಬೆಲೆ ಸೃಷ್ಟಿಯಾಗಿದೆ. ಮೂರು ವರ್ಷಗಳ ಹಿಂದೆಯೂ ಇದೇ ರೀತಿಯ ಸ್ಥಿತಿ ನಿರ್ಮಾಣವಾಗಿತ್ತು.
https://www.suddikanaja.com/2021/07/17/affect-of-root-worm-in-arecanut/