ಸುದ್ದಿ ಕಣಜ.ಕಾಂ | TALUK | CRIME
ಹೊಸನಗರ: ತಾಲೂಕಿನ ಕರ್ಣಾಟಕ ಬ್ಯಾಂಕಿನ ಶಾಖೆಯೊಂದರಲ್ಲಿ ಅಂದಾಜು 4.15 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ.
ಬ್ಯಾಂಕಿನ ಕಿಟಕಿಯನ್ನು ಕಟರ್ ನಿಂದ ಕತ್ತರಿಸಿ ಕೃತ್ಯ ಎಸಗಲಾಗಿದೆ. ಸಿ.ಸಿ ಕ್ಯಾಮೆರಾ, ಕಂಪ್ಯೂಟರ್, ರೌಟರ್, ಡಿವಿಆರ್, ಫೈರ್ ಅಲಾರಾಂ ಸೇರಿದಂತೆ ಇನ್ನಿತರ ಸಮಗ್ರಿಗಳನ್ನು ಕಳವು ಮಾಡಲಾಗಿದೆ ಎಂದು ದೂರು ನೀಡಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.