ಸುದ್ದಿ ಕಣಜ.ಕಾಂ | AGUMBE | CRIME
ತೀರ್ಥಹಳ್ಳಿ: ಈ ಕ್ಯಾಂಟರ್ ಲಾರಿಯಲ್ಲಿ ಭತ್ತ ತುಂಬಿರದೇ ಇದ್ದಿದ್ದರೆ ಆಗುಂಬೆಯ ಪ್ರಪಾತದ ಪಾಲಾಗುತಿತ್ತು. ಲಾರಿ ಚಾಲಕನ ಪ್ರಾಣವೂ ಉಳಿಯುತಿರಲಿಲ್ಲ.
ಇಂಹಹದ್ದೊಂದು ಘಟನೆ ಗುರುವಾರ ಆಗುಂಬೆಯ ಆರು ಹಾಗೂ ಏಳನೇ ತಿರುವಿನ ನಡುವೆ ಸಂಭವಿಸಿದೆ. ಭಾರಿ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ.
https://www.suddikanaja.com/2021/07/08/agumbe-ghat-re-open/
ಘಟನೆ ನಡೆದಿದ್ದು ಹೇಗೆ?
ಕ್ಯಾಂಟರ್ ಲಾರಿಯು ಭತ್ತ ತುಂಬಿಕೊಂಡು ಶಿವಮೊಗ್ಗದಿಂದ ಹೆಬ್ರಿ ಕಡೆಗೆ ಹೊರಟಿತ್ತು. ಆಗ ಆಗುಂಬೆಯ ಹೇರ್ ಪಿನ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ. ಆಗ ಲಾರಿಯು ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಲಾರಿಯಲ್ಲಿ ಭತ್ತ ಲೋಡ್ ಆಗಿದ್ದ ಪರಿಣಾಮ ಭಾರ ಹೆಚ್ಚಿತ್ತು. ಹೀಗಾಗಿ, ಲಾರಿಯ ಎರಡು ಚಕ್ರ ಪ್ರಪಾತಕ್ಕೆ ಇಳಿದಿವೆ.
ಚಾಲಕ ಹಾಗೂ ಕ್ಲಿನರ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಾವಿನ ದವಡೆಯಲ್ಲಿದ್ದ ಅವರನ್ನು ರಕ್ಷಣೆ ಮಾಡಲಾಗಿದೆ.
ಘಾಟಿಯಲ್ಲಿ ಕೆಲ ಹೊತ್ತು ಸಂಚಾರ ವ್ಯತ್ಯಯ
ಅಪಘಾತದಿಂದಾಗಿ ಕೆಲ ಕಾಲ ಘಾಟಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಘಟನಾ ಸ್ಥಳಕ್ಕೆ ಆಗುಂಬೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.suddikanaja.com/2021/06/27/woman-tried-to-suicide-in-sharavathi-back-water/