ಸುದ್ದಿ ಕಣಜ.ಕಾಂ | KARNATAKA | EDUCATION
ಶಿವಮೊಗ್ಗ: ತಾಂತ್ರಿಕ ಸಲಹಾ ಸಮಿತಿಯ ಒಪ್ಪಿಗೆ ಬಳಿಕ 1 ರಿಂದ 5ನೇ ವರೆಗಿನ ತರಗತಿ ಆರಂಭದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ನಗರಕ್ಕೆ ಶನಿವಾರ ಆಗಮಿಸಿರುವ ಸಚಿವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಈಗಾಗಲೇ 6-9ನೇ ತರಗತಿವರೆಗಿನ ತರಗತಿಗಳನ್ನು ಆರಂಭಿಸಲಾಗಿದೆ. 1-5 ನೇ ತರಗತಿಗಳ ಪುನರಾರಂಭ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯ ಒಪ್ಪಿಗೆ ಪಡೆಯಲಾಗುವುದು ಎಂದರು.
ಅಗತ್ಯ ಬಿದ್ದರಷ್ಟೇ ಪಠ್ಯಕ್ರಮಕ್ಕೆ ಕತ್ತರಿ
ಪಠ್ಯಕ್ರಮ ಕಡಿತದ ಬಗ್ಗೆ ಇದುವರೆಗೆ ತೀರ್ಮಾನಿಸಿಲ್ಲ. ಬರುವ ದಿನಗಳಲ್ಲಿ ರಜೆ ಕಡಿಮೆ ಮಾಡಿ ಇನ್ನಷ್ಟು ತರಗತಿ ನಡೆಸಬಹುದೇ ಎಂಬುವುದರ ಬಗ್ಗೆ ಚಿಂತಿಸಲಾಗುವುದು. ಇಲ್ಲಿಯ ತನಕ ಈ ಬಗ್ಗೆ ತೀರ್ಮಾನಿಸಿಲ್ಲ. ಅಗತ್ಯ ಎನಿಸಿದರೆ ಪಠ್ಯಕ್ರಮ ಕಡಿಮೆಗೊಳಿಸಲಾಗುವುದು.