ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ವ್ಯಕ್ತಿಯೊಬ್ಬರಿಗೆ ಬೈಕಿನಲ್ಲಿ ಲಿಫ್ಟ್ ಕೊಡುವುದಾಗಿ ನಂಬಿಸಿ ಹಣ ದೋಚಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದ್ದು, ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಸಾಗರ ರಸ್ತೆಯಲ್ಲಿ ಗಾಡಿಕೊಪ್ಪ ನಿವಾಸಿ ರಾಜು ಎಂಬುವವರಿಗೆ ಹೆದರಿಸಿ ₹20,000 ನಗದು ದೋಚಲಾಗಿದೆ. ರಾಜು ಅವರು ಬ್ಯಾಂಕ್ ವೊಂದರಲ್ಲಿ ನೌಕರರಾಗಿರುವುದು ತಿಳಿದುಬಂದಿದೆ.
READ | ಶಿವಮೊಗ್ಗದಲ್ಲಿ ಮುಂದುವರಿದ ಬೈಕ್ ಕಳ್ಳರ ಹಾವಳಿ
ಹೇಗೆ ನಡೀತು ಘಟನೆ?
ರಾಜು ಅವರು ಕೆಲಸ ಮುಗಿಸಿಕೊಂಡು ಗಾಡಿಕೊಪ್ಪದಲ್ಲಿರುವ ಮನೆಗೆ ಹೋಗಿದ್ದಾರೆ. ಆಗ ಮನೆಯ ಕೀಲಿ ಕೈ ಕಳೆದುಕೊಂಡಿರುವುದು ಗಮನಕ್ಕೆ ಬಂದಿದೆ. ದಾರಿಯ ಮಧ್ಯೆ ಕೀಲಿ ಕೈ ಬಿದ್ದರಬಹುದು ಎಂಬ ಅನುಮಾನದ ಮೇರೆಗೆ ಮಾರನೇ ದಿನ ಬೆಳಗ್ಗೆ ಹುಡುಕುತ್ತಾ ಬಂದ ಮಾರ್ಗದಲ್ಲೇ ಹುಡುಕುತ್ತ ಹೋಗಿದ್ದಾರೆ. ಆ ವೇಳೆ, ಸಾಗರ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ವೊಂದಕ್ಕೆ ಲಿಫ್ಟ್ ಕೇಳಿದ್ದು, ಕುವೆಂಪು ರಸ್ತೆವರೆಗೆ ಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ. ಬೈಕಿನಲ್ಲಿದ್ದ ಇಬ್ಬರು ಯುವಕರು ರಾಜು ಅವರನ್ನು ಕೂಡಿಸಿಕೊಂಡು ಹೋಗಿದ್ದು, ಹೆವನ್ ಇನ್ ಬಾರ್ ಪಕ್ಕದ ರಸ್ತೆಯಲ್ಲಿ ಕರೆದೊಯ್ದು ಬೈಕ್ ನಿಲ್ಲಿಸಿ, ಹೆದರಿಸಿ ಹಣ ವಸೂಲಿ ಮಾಡಿದ್ದಾರೆ.
https://www.suddikanaja.com/2021/06/07/parking-marking-in-neharu-road/