ಸುದ್ದಿ ಕಣಜ.ಕಾಂ | TALUK | CRIME
ಸಾಗರ: ಬಸ್ ನಿಲ್ದಾಣಕ್ಕೆ ಹೋಗಿ ವಾಪಸ್ ಮನೆಗೆ ಬರುವಷ್ಟರಲ್ಲಿ ಕಳ್ಳರು ತಮ್ಮಕೈಚಳಕ ತೋರಿದ್ದು, ಚಿನ್ನಾಭರಣ, ಬೆಳ್ಳಿ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.
ತಾಲೂಕಿನ ಗೆಣಸಿನಕುಣಿ ಗ್ರಾಮದ ಮಂಜುನಾಥ್ ಜೋಗಿ ಎಂಬುವವರ ಮನೆಯಲ್ಲಿಕಳ್ಳತನ ಮಾಡಲಾಗಿದೆ. ಮನೆ ಹಿಂಬಾಗಿಲ ಬೀಗ ಮುರಿದು ನಗದು, ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಲಾಗಿದೆ.
READ | ಶಿವಪ್ಪನಾಯಕ ಮ್ಯೂಸಿಯಂ ಕ್ಲೋಸ್, ಕಾರಣವೇನು?
ನಡೆದಿದ್ದು ಏನು?
ಮಂಜುನಾಥ್ ಅವರು ಶಿವಮೊಗ್ಗದಲ್ಲಿರುವ ಮಗ ಊರಿಗೆ ಬಂದಿದ್ದಾನೆಂಬ ಕಾರಣಕ್ಕೆ ಕರೆದುಕೊಂಡು ಬರಲು ಬಸ್ ನಿಲ್ದಾಣಕ್ಕೆ ಹೋಗಿದ್ದಾರೆ. ಈ ಸಮಯ ಸಾಧಿಸಿದ ಕಳ್ಳರು ಬೀರುವಿನಲ್ಲಿ ಇಟ್ಟಿದ್ದ ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಿದ್ದಾರೆ.
ಏನೇನು ಕಳ್ಳತನ ಮಾಡಲಾಗಿದೆ?
ಬೀರುವಿನಲ್ಲಿ ಇಟ್ಟಿದ್ದ ₹80,000 ನಗದು, 10 ಗ್ರಾಂ ತೂಕದ ಎರಡು ಚಿನ್ನದ ಚೈನ್, 1 ಚಿನ್ನದ ಪೆಂಡೆಂಟ್, 6 ಜೊತೆ ಬೆಳ್ಳಿ ಕಾಲುಂಗುರ, 4 ಜೊತೆ ಬೆಳ್ಳಿ ಕಾಲು ಚೈನ್, 2 ಬೆಳ್ಳಿ ಉಂಗುರವನ್ನು ಕಳ್ಳತನ ಮಾಡಲಾಗಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.suddikanaja.com/2020/12/25/man-arrested-in-sagar-for-theft-in-house/