ಸುದ್ದಿ ಕಣಜ.ಕಾಂ | DISTRICT | EDUCATION CORNER
ಶಿವಮೊಗ್ಗ: ತರಾತುರಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ(NEP) ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಇದನ್ನು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ವಿರೋಧಿಸಿದರು.
https://www.suddikanaja.com/2021/06/07/criminal-case-against-fake-pesticide-seller/
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ದೇಶಿತ ಶಿಕ್ಷಣ ನೀತಿಯು ಖಾಸಗೀಕರಣಕ್ಕೆ ಪುಷ್ಠಿ ನೀಡಲಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಉನ್ನತ ಶಿಕ್ಷಣ ಸಚಿವರು ಅಧಿಕೃತವಾಗಿ ನೀತಿಯನ್ನು ಉದ್ಘಾಟಿಸಲಿದ್ದಾರೆ. ಇದರಲ್ಲಿನ ಲೋಪಗಳನ್ನು ಸರಿಪಡಿಸದೇ ಜಾರಿಗೆ ತರಲಾಗುತ್ತಿದೆ. ಜಾರಿಗೆ ಮುನ್ನ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸುವ ಕೆಲಸವೂ ಮಾಡಿಲ್ಲ ಎಂದು ಟೀಕಿಸಿದರು.
ಶಿಕ್ಷಣ ಕ್ಷೇತ್ರವೇ ಪಾತಾಳಕ್ಕೆ
ಪೂರ್ವಾಪರ ಯೋಚಿಸದೇ ಶಿಕ್ಷಣ ನೀತಿ ಜಾರಿಗೆ ತರುವುದು ಸರಿಯಲ್ಲ. ಶಿಕ್ಷಣ ಕ್ಷೇತ್ರವೇ ಪಾತಾಳಕ್ಕೆ ಇಳಿಯಲಿದೆ. ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ಮಾಡುವುದು ಸ್ವಾಗತಾರ್ಹ. ಆದರೆ, ಚರ್ಚಿಸದೇ ಅದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಇದನ್ನು ವಿರೋಧಿಸಲಿದೆ ಎಂದರು.
ಈ ಶಿಕ್ಷಣ ನೀತಿಯಿಂದ ಉದ್ಯೋಗ ಕಳೆದುಕೊಳ್ಳುವ ಭೀತಿ ಇದೆ. ಬಹು ಸಂಸ್ಕೃತಿಯ ನಾಶವಾಗಲಿದೆ. ಇಡೀ ಶಿಕ್ಷಣ ಖಾಸಗಿಯವರ ವಶವಾಗಲಿದೆ. 3ರಿಂದ 18 ವರ್ಷದವರೆಗಿನ ವೆಚ್ಚವನ್ನು ಸರ್ಕಾರಕ್ಕೆ ಭರಿಸಬೇಕು. ಆದರೆ, ಈ ಹೊಸ ನೀತಿಯಿಂದ ಖಾಸಗಿ ಕ್ಷೇತ್ರಗಳು ಹೆಚ್ಚಾಗಿ ಬಡ ಮಕ್ಕಳು ಓದುವುದೇ ಕಷ್ಟವಾಗಲಿದೆ ಎಂದರು.
ಮಾಧ್ಯಮಗೋಷ್ಠಿಯಲ್ಲಿ ಪಕ್ಷದ ಎನ್.ರಮೇಶ್, ದೇವಿಕುಮಾರ್, ಯಮುನಾ ರಂಗೇಗೌಡ, ರಂಗೇಗೌಡ, ರಾಘವೇಂದ್ರ ಉಪಸ್ಥಿತಿರಿದ್ದರು.
https://www.suddikanaja.com/2021/03/14/fake-circular-of-collegiate-department-about-leave/