ಸುದ್ದಿ ಕಣಜ.ಕಾಂ | CITY | RAILWAY NEWS
ಶಿವಮೊಗ್ಗ: ನಗರದ ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಮಂಗಳವಾರ ವಿಭಿನ್ನವಾಗಿ ಸ್ವಚ್ಚತೆ ಕುರಿತು ಜಾಗೃತಿ ಮೂಡಿಸಲಾಯಿತು. ರೈಲ್ವೆ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ ಬೆನ್ನಲ್ಲೇ ಜಾಗೃತಿ ಮೂಲಕ ಸ್ವಚ್ಚ ರೈಲ್ವೆ ನಿಲ್ದಾಣಕ್ಕಾಗಿ ನೈರುತ್ಯ ರೈಲ್ವೆ ಮತ್ತೊಂದು ಹೆಜ್ಜೆ ಇಟ್ಟಿದೆ.
ಪ್ರಯಾಣಿಕರು ಹೋಗುವಾಗ ಹಾಗೂ ಬರುವಾಗ ಅವರಿಗೆ ರೈಲ್ವೆ ನಿಲ್ದಾಣದ ಸ್ವಚ್ಚತೆಯ ಕಡೆಗೆ ಭಿತ್ತಿ ಪತ್ರ ಅಂಟಿಸಿದ ಬೋರ್ಡ್ ಹಿಡಿದು ತಿಳಿವಳಿಕೆ ಮೂಡಿಸಲಾಗುತ್ತಿದೆ.
READ | ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ ಅವಕಾಶ, ಎಷ್ಟು ಹುದ್ದೆ ಭರ್ತಿ, ಕೊನೆ ದಿನಾಂಕ, ಮಾಹಿತಿಗಾಗಿ ಕ್ಲಿಕ್ಕಿಸಿ
ಪ್ರಯಾಣಿಕರಿಂದ ಫೀಡ್ ಬ್ಯಾಕ್ ಸಂಗ್ರಹ
ರೈಲ್ವೆ ಬೋಗಿಯಲ್ಲಿಯೇ ಪ್ರಯಾಣಿಕರಿಂದ ಸಿಬ್ಬಂದಿ ಫೀಡ್ ಬ್ಯಾಕ್ ಪಡೆದರು. ಸ್ವಚ್ಚತೆಯ ಕುರಿತು ಆಗಬೇಕಾದ ಕೆಲಸ ಮತ್ತು ಈ ನಿಟ್ಟಿನಲ್ಲಿ ಜನ ಜವಾಬ್ದಾರಿಯ ಬಗ್ಗೆ ತಿಳಿಹೇಳಲಾಯಿತು.
ರೈಲ್ವೆ ನಿಲ್ದಾಣದ ಪ್ರವೇಶ ದ್ವಾರದಲ್ಲಿಯೇ ನಿಂತ ಸಿಬ್ಬಂದಿ ಜನರ ಗಮನ ತನ್ನೆಡೆಗೆ ಸೆಳೆದು ಯಾವುದೇ ಕಾರಣಕ್ಕೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಬಾರದು. ತ್ಯಾಜ್ಯಗಳೇನೇ ಇದ್ದರೂ ಕಸದ ಬುಟ್ಟಿಗೆ ಹಾಕಬೇಕು ಎಂದು ಮನವಿ ಮಾಡಿದರು.