ಸುದ್ದಿ ಕಣಜ.ಕಾಂ | TALUK | NH ROAD
ಶಿವಮೊಗ್ಗ: ತ್ಯಾಗರ್ತಿ ಕ್ರಾಸ್ನಿಂದ ಎಲ್.ಬಿ.ಕಾಲೇಜುವರೆಗಿನ ರಸ್ತೆಯ ಎರಡು ಬದಿ ಅಂಚಿನಲ್ಲಿ ಅಡ್ಡ ಬರುವ ವಿವಿಧ ಜಾತಿಯ 488 ಮರಗಳನ್ನು ತೆರವುಗೊಳಿಸುವ ಬಗ್ಗೆ ಸೆಪ್ಟೆಂಬರ್ 3ರಂದು ಸಭೆ ಕರೆಯಲಾಗಿದೆ.
ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗವು ಸಾಗರ ತಾಲೂಕು ಸಾಗರ ಪಟ್ಟಣ ವ್ಯಾಪ್ತಿಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 206ರ 278 ಕಿ.ಮೀ. ರಿಂದ 286.40 ಕಿ.ಮೀ.ವರೆಗೆ ಒಟ್ಟು 8.40 ಕಿ.ಮೀ. ರಸ್ತೆಯ ಅಗಲೀಕರಣಕ್ಕೆ ಮಂಜೂರಾತಿ ಸಿಕ್ಕಿದೆ.
ಅರಣ್ಯ ಇಲಾಖೆಯಿಂದ ಸಾಗರದ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಸೆ.3 ರಂದು ಬೆಳಗ್ಗೆ 11.30ಕ್ಕೆ ಸಾರ್ವಜನಿಕ ಅಹವಾಲು ಸಭೆಯನ್ನು ಏರ್ಪಡಿಸಲಾಗಿದೆ. ಈ ಸಭೆಯಲ್ಲಿ ಸಾರ್ವಜನಿಕರು, ಸಂಘ- ಸಂಸ್ಥೆಗಳು ಹಾಗೂ ಪರಿಸರಾಸಕ್ತರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ನೀಡುವಂತೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.