ಸುದ್ದಿ ಕಣಜ.ಕಾಂ | TALUK | CRIME NEWS
ಸೊರಬ: ತಾಲೂಕಿನ ಎನ್.ದೊಡ್ಡೇರಿ ಗ್ರಾಮದಲ್ಲಿ ಬಾಲಕಿಯೊಬ್ಬಳು ತಾಯಿಯೊಂದಿಗೆ ಶುಕ್ರವಾರ ಗದ್ದೆಗೆ ಹೋಗಿದ್ದು, ಹಾವು ಕಚ್ಚಿ ಮೃತಪಟ್ಟಿದ್ದಾಳೆ.
ಐಶ್ವರ್ಯ(7) ಮೃತಪಟ್ಟಿದ್ದಾಳೆ. ತಾಯಿ ಮಮತಾ ಅವರೊಂದಿಗೆ ಗದ್ದೆಗೆ ಹೋಗಿದ್ದು, ಕಳೆ ತೆಗೆಯುವಾಗ ಬಾಲಕಿಯು ಬದುವಿನ ಮೇಲೆ ಓಡಾಡುತ್ತಿದ್ದಳು. ಆಗ ಹಾವು ಕಚ್ಚಿದೆ. ತಕ್ಷಣ ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗಿಲ್ಲ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.