ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ಈದ್ ಮಿಲಾದ್ ಹಬ್ಬದಂದು ಭದ್ರಾವತಿಯ ಲ್ಲಿ ಗಲಾಟೆ ಮಾಡಿರುವ ಹಾಗೂ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇರೆಗೆ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿವೆ.
ಕೇಸ್ ನಂಬರ್ 1
ಕೋವಿಡ್ ಮಾರ್ಗಸೂಚಿ ಇದ್ದರೂ ಯಾವುದೇ ರೀತಿಯ ಪರವಾನಗಿಯನ್ನು ಪಡೆಯದೇ ಗುಂಪು ಮೆರವಣಿಗೆ ಮಾಡಲಾಗಿದೆ. ಈ ಕಾರಣಕ್ಕಾಗಿ ಹಲವರ ಮೇಲೆ ದೂರು ದಾಖಲಾಗಿದೆ.
ಹೊಳೆಹೊನ್ನೂರು ವೃತ್ತದಿಂದ ಸಿ.ಎನ್.ರಸ್ತೆ, ರಂಗಪ್ಪ ಸರ್ಕಲ್, ಮಾಧವ್ ಚಾರ್ ಸರ್ಕಲ್, ತರೀಕೆರೆ ರಸ್ತೆ ಮುಖಾಂತರ ಮೆರವಣಿಗೆ ಮಾಡಿ ಅಲ್ಲಿಂದ ಸಾದತ್ ದರ್ಗಾಕ್ಕೆ ಗುಂಪು ತಲುಪಿದೆ. ಈ ಕಾರಣಕ್ಕಾಗಿ, ಮರ್ತುಜಾ ಖಾನ್, ಅಮೀರ್ ಜಾನ್, ಬಾಬ್ ಜಾನ್, ಸಾಬ್ ಜಾನ್ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೇಸ್ ನಂಬರ್ 2
ತರೀಕೆರೆ ರಸ್ತೆಯ ಮೇಲ್ಸೇತುವೆಯಲ್ಲಿ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್ ಮೇಲೆ ಹತ್ತಿ ಧ್ವಜ ಹಾರಿಸಲಾಗಿದೆ. ನಂತರ ಅವಾಚ್ಯವಾಗಿ ನಿಂದನೆ ಮಾಡಲಾಗಿದೆ. ಪೊಲೀಸರು ಎಚ್ಚರಿಸಿದರೂ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಕಾರಣಕ್ಕಾಗಿ, ಮುಸ್ತಾಕೀಮ್, ಛೋಟಾ, ಜಬೀವುಲ್ಲಾ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.
https://www.suddikanaja.com/2021/07/09/ganja-arrest/