ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ಗಂಜಾ ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಮೂವರನ್ನು ಬೀಟ್ ನಲ್ಲಿದ್ದ ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿಯ ದುರ್ಗಿನಗರದ ನಿವಾಸಿ ತೌಫಿಕ್(25), ಅನ್ವರ್ ಕಾಲೊನಿಯ ಸಾದತ್(20),ಮೋಮಿನ್ ಮೊಹಲ್ಲಾದ ಸೈಯ್ಯದ್ ಬಿಲಾಲ್(21) ಬಂಧಿತ ಆರೋಪಿಗಳು.
ವೈದ್ಯಕೀಯ ಪರೀಕ್ಷೆ ನಂತರ ಗಾಂಜಾ ಸೇವಿಸಿರುವುದು ಖಚಿತ
ಜಟ್ ಪಟ್ ನಗರದ ಮೈದಾನದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಯುವಕರನ್ನು ಗುಂಪೊಂದನ್ನು ಗಸ್ತಿನಲ್ಲಿದ್ದ ಪೊಲೀಸರು ಗಮನಿಸಿದ್ದಾರೆ. ಬಳಿಕ ಅವರನ್ನು ವಶಕ್ಕೆ ಪಡೆಯಲಾಗಿದೆ. ನಂತರ, ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಆಗ ಅವರು ಗಂಜಾ ಸೇವನೆ ಮಾಡಿರುವ ವಿಚಾರ ಖಚಿತವಾಗಿದೆ. ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.