ಸುದ್ದಿ ಕಣಜ.ಕಾಂ | TALUK | CRIME NEWS
ಸೊರಬ: ವಿದ್ಯುತ್ ತಗುಲಿದ ತಮ್ಮನನ್ನು ರಕ್ಷಿಸುವ ಮೂಲಕ ಅಕ್ಕ ಸಾಹಸ ಮೆರೆದಿದ್ದಾಳೆ. ಈಕೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ತಾಲೂಕಿನ ಉರಗನಹಳ್ಳಿ ಗ್ರಾಮದಲ್ಲಿ ಐದನೇ ತರಗತಿ ಓದುತ್ತಿರುವ ಪ್ರಾರ್ಥನಾ, ಮೂರನೇ ತರಗತಿಯ ತನ್ನ ತಮ್ಮ ಧನುಷ್ ನನ್ನು ವಿದ್ಯುತ್ ಅವಘಡದಿಂದ ಕಾಪಾಡಿದ್ದಾಳೆ.
ಧನುಷ್ ತಮ್ಮ ಮನೆಯಲ್ಲಿ ಟಿವಿ ಹಾಕುವುದಕ್ಕಾಗಿ ವಿದ್ಯುತ್ ಸಂಪರ್ಕ ಹೊಂದಿದ್ದ ಪಿನ್ ಹಿಡಿದಿದ್ದಾನೆ. ವಿದ್ಯುತ್ ಸ್ಪರ್ಶವಾಗಿದ್ದೇ ಕಿರುಚಿಕೊಂಡಿದ್ದಾನೆ. ಅಲ್ಲಿಯೇ ಇದ್ದ ಅಕ್ಕ ಪ್ರಾರ್ಥನಾ ಧಾವಿಸಿ ತಮ್ಮನ ಅಂಗಿಯ ಕಾಲರ್ ಹಿಡಿದು ಹಿಂದಕ್ಕೆ ಎಳೆದಿದ್ದಾಳೆ. ಈ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ವಿದ್ಯುತ್ ಸ್ಪರ್ಶದಿಂದಾಗಿ ಕೈಗೆ ಸ್ವಲ್ಪ ಗಾಯವಾಗಿದ್ದು, ಪ್ರಾಣಾಪಾಯವಾಗಿಲ್ಲ. ಸ್ವಲ್ಪ ವಿಳಂಬವಾಗಿದ್ದರೂ ಅವಘಡ ಸಂಭವಿಸುವ ಸಾಧ್ಯತೆ ಇತ್ತು.
ಈ ವಿಚಾರ ಬೆಳಕಿಗೆ ಬಂದಿದ್ದು ಹೇಗೆ
ವಿದ್ಯುತ್ ಸ್ಪರ್ಶ ಆಗಿರುವ ಬಗ್ಗೆ ಮನೆಯಲ್ಲಿ ಯಾರಿಗೆ ಮಾಹಿತಿ ನೀಡಿರಲಿಲ್ಲ. ಶಾಲೆಗೆ ಹೋದಾಗ ಕೈಗೆ ಸುಟ್ಟ ಗಾಯವಾಗಿದ್ದರ ಬಗ್ಗೆ ಶಿಕ್ಷಕಿ ವಿಚಾರಣೆ ಮಾಡಿದ್ದಾರೆ. ಆಗ ನಡೆದಿರುವ ಘಟನೆಯ ಬಗ್ಗೆ ಧನುಷ್ ತಿಳಿಸಿದ್ದಾನೆ. ನಂತರ, ಪ್ರಾರ್ಥನಾಳ ಸಮಯ ಪ್ರಜ್ಞೆಗೆ ಭೇಷ್ ಎನ್ನಲಾಗಿದೆ.
ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.
https://www.suddikanaja.com/2020/12/12/mother-killed-her-own-child-in-bengaluru/