ಸುದ್ದಿ ಕಣಜ.ಕಾಂ | DISTRICT | ELECTION
ಶಿವಮೊಗ್ಗ: ಕೌತುಕದ ಚುನಾವಣಾ ಕಣವಾಗಿ ಮಾರ್ಪಾಟು ಆಗಿದ್ದ ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಚುನಾವಣೆಯಲ್ಲಿ ಮಂಜುನಾಥ್ ಅವರು ಜಯಗಳಿಸಿದ್ದಾರೆ.
ಮತದಾರ ಮಂಜುನಾಥ್ ಅವರಿಗೆ 2,756 ಮತಗಳನ್ನು ನೀಡುವ ಅಧ್ಯಕ್ಷ ಗಾದಿಗೆ ಆಯ್ಕೆ ಮಾಡಿದ್ದಾರೆ. ನಿಕಟ ಪೂರ್ವ ಅಧ್ಯಕ್ಷ ಡಿ.ಬಿ.ಶಂಕರಪ್ಪ ಅವರು 2,314 ಮತಗಳನ್ನು ಪಡೆದು 442 ಮತಗಳಿಂದ ಮಂಜುನಾಥ್ ಅವರ ವಿರುದ್ಧ ಸೋಲುಂಡಿದ್ದಾರೆ. ಇನ್ನುಳಿದ ಅಭ್ಯರ್ಥಿಗಳಾದ ಶಿ.ಜು. ಪಾಶಾ ಅವರು 249 ಹಾಗೂ ಗಾರಾ ಶ್ರೀನಿವಾಸ್ 49 ಮತಗಳನ್ನು ಪಡೆದಿದ್ದಾರೆ. 49 ಮತಗಳು ತಿರಸ್ಕೃತಗೊಂಡಿವೆ.