ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಪೊಲೀಸರು ಮತ್ತು ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ 910 ಕೆಜಿ ಶ್ರೀಗಂಧದ ಮರದ ತುಂಡುಗಳು ಲಭಿಸಿದ್ದು, ಪ್ರಕರಣದಲ್ಲಿ ಒಬ್ಬರನ್ನು ಬಂಧಿಸಲಾಗಿದೆ.
ಟಿಪ್ಪು ನಗರ ನಿವಾಸಿ ಅಪ್ಸರ್ ಬಂಧಿತ ಆರೋಪಿ. ಕೇರಳ ನೋಂದಣಿಯ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಆ ವಾಹನದಲ್ಲೂ ಶ್ರೀಗಂಧದ ತುಂಡುಗಳನ್ನು ದಾಸ್ತಾನು ಮಾಡಲಾಗಿತ್ತು. ಇದು ಭಾರಿ ದೊಡ್ಡ ಪ್ರಕರಣ ಎಂದು ಪೊಲೀಸ್ ಇಲಾಖೆ ಮೂಲಗಳೇ ತಿಳಿಸಿವೆ.
READ | ಶಿವಮೊಗ್ಗ ದಲ್ಲಿ ಉದ್ಯೋಗ ಅವಕಾಶ, ಸ್ಥಳೀಯರಿಗೆ ಆದ್ಯತೆ, ವಯೋಮಿತಿ ಇಲ್ಲ, ಈಗಲೇ ಅರ್ಜಿ ಸಲ್ಲಿಸಿ
ಟಿಪ್ಪು ನಗರದ ಏಳನೇ ಕ್ರಾಸಿನ ಗೋದಾಮಿನಲ್ಲಿ ಸಂಗ್ರಹ ಮಾಡಿದ್ದ ಶ್ರೀಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಇದು ಮೌಲ್ಯ ₹20 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ.
ಅಮರಾವತಿಗೆ ಕೊಂಡೊಯ್ಯಲು ಇಡಲಾಗಿದ್ದ ಶ್ರೀಗಂಧ
ಪೊಲೀಸರಿಗೆ ಪಕ್ಕಾ ಮಾಹಿತಿ ಲಭಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಕಾರ್ಯಾಚರಣೆ ಮಾಡಿದ್ದಾರೆ. ಆಗ ಮನೆಯಲ್ಲಿ ದಾಸ್ತಾನು ಮಾಡಿದ್ದ ಭಾರಿ ಪ್ರಮಾಣದ ಶ್ರೀಗಂಧ ಸಿಕ್ಕಿದೆ.
ಟಿಪ್ಪುನಗರದ ಅಪ್ಸರ್ ಬೇರೆ ಕಡೆಯಿಂದ ಶ್ರೀಗಂಧದ ತುಂಡುಗಳನ್ನು ತಂದು ಸಂಗ್ರಹಿಸಿ ಅಮರಾವತಿಗೆ ಸಾಗಾಟ ಮಾಡುತ್ತಿದ್ದ ಎಂಬ ವಿಷಯ ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಬಂಧಿತನ ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಹಾಗೂ ಈ ಹಿಂದೆ ಆತ ಇಂತಹ ಕೃತ್ಯಗಳಲ್ಲಿ ಭಾಗಿಯಾದ ಮಾಹಿತಿ ಇಲ್ಲ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದವರಿಗೆ ಗುಡ್ ನ್ಯೂಸ್, ಉದ್ಘಾಟನೆ ಆಗಲಿದೆ ಮೈಸೂರ್ ಸ್ಯಾಂಡಲ್ ಮಳಿಗೆ