ಸುದ್ದಿ ಕಣಜ.ಕಾಂ | KARNATAKA | POLITICAL NEWS
ಶಿವಮೊಗ್ಗ: ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದರೂ ಕಳ್ಳ ಸಾಗಾಣಿಕೆ ನಿಂತಿಲ್ಲ. ಹೀಗಾಗಿ, ಅಗತ್ಯವೆನಿಸಿದರೆ ಕೆಲವೊಂದು ಮಾರ್ಪಾಟು ತರಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
READ | ಶಿವಮೊಗ್ಗ ದಲ್ಲಿ ಮತ್ತೆ ಕೊರೊನಾ ಭೀತಿ, ಒಂದೇ ಖಾಸಗಿ ಆಸ್ಪತ್ರೆಯಲ್ಲಿ 23ಕ್ಕೂ ಹೆಚ್ಚು ಜನರಿಗೆ ಪಾಸಿಟಿವ್
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಕಾನೂನನ್ನು ಇನ್ನಷ್ಟು ಕಠಿಣ ಮಾಡುವ ಅಗತ್ಯ ಇದೆ. ಅದಕ್ಕಾಗಿ ಅಗತ್ಯ ಮಾರ್ಪಾಡು ಮಾಡಲಾಗುವುದು ಎಂದರು.
ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ನಡತೆ ನೋಡಿ ಕಲಿಯಲಿ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಭೇಟಿ ನೀಡಿದಾಗ ಮೋದಿ ಅವರು ನೀಡಿದ ಗೌರವ ಆದರ್ಶಪ್ರಾಯ. ಅದನ್ನು ಬಿಟ್ಟು ಸಿದ್ದರಾಮಯ್ಯ ಅವರು ಬರೀ ಬಿಜೆಪಿ ರಾಜ್ಯಾಧ್ಯಕ್ಷರು ಸೇರಿದಂತೆ ಮುಖಂಡರ ಮೇಲೆ ದೂರುತಿರುತ್ತಾರೆ.
-ಕೆ.ಎಸ್.ಈಶ್ವರಪ್ಪ, ಸಚಿವ
ಗಾಯಾಳುಗಳಿಬ್ಬರ ಚಿಕಿತ್ಸೆ ವೆಚ್ಚ ಭರಿಸುವೆ
ತೀರ್ಥಹಳ್ಳಿಯಲ್ಲಿ ಗೋವುಗಳ ಕಳ್ಳಸಾಗಣೆ ಮಾಡುತ್ತಿದ್ದವರನ್ನು ಬೆನ್ನಟ್ಟಿ ಹೋದಾಗ ಅವರ ಮೇಲೆ ವಾಹನ ಹತ್ತಿಸಿದವರಿಗೆ ಭೇಟಿ ನೀಡಿದ ಸಚಿವರು, ಚಿಕಿತ್ಸೆಯ ವೆಚ್ಚ ಭರಿಸುವ ಭರವಸೆ ನೀಡಿದರು.
ಗೋವು ರಕ್ಷಕರ ಮೇಲೆಯೇ ಹಲ್ಲೆ ಮಾಡಲಾಗಿದೆ. ಇದನ್ನು ಗಮನಿಸಿದರೆ ಕಾನೂನು ಇನ್ನಷ್ಟ ಕಠಿಣವಾಗಬೇಕೆನಿಸುತ್ತದೆ. ಈ ಬಗ್ಗೆ ತಜ್ಞರ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು.
https://www.suddikanaja.com/2021/07/17/anti-cow-slaughter-bill-strict-implementation/