ಸುದ್ದಿ ಕಣಜ.ಕಾಂ | CITY | SNAKE RESCUE
ಶಿವಮೊಗ್ಗ: ನಗರದ ಗೋಪಿಶೆಟ್ಟಿಕೊಪ್ಪದ ಗದ್ದೆಮನೆ ಲೇಔಟ್ ನ ಮನೆಯೊಂದರಲ್ಲಿ ಮಕ್ಕಳ ಶೂ ಒಳಗೆ ಹಾವೊಂದು ಅವಿತು ಕುಳಿತಿದ್ದು, ಅದನ್ನು ಸ್ನೇಕ್ ಕಿರಣ್ ಸಂರಕ್ಷಿಸಿದ್ದಾರೆ.
ಮಕ್ಕಳ ಶೂನಲ್ಲಿ ಅವಿತಿದ್ದ ಹಾವನ್ನು ರಕ್ಷಿಸಿದ ವಿಡಿಯೋ ವೀಕ್ಷಿಸಿ (VIDEO REPORT)
ಶೂ ಒಳಗೆ ಅವಿತುಕೊಂಡು ಕುಳಿತಿದ್ದ ಹಾವನ್ನು ರಕ್ಷಿಸಿದ್ದಲ್ಲದೇ ಉರಗಗಳ ಬಗ್ಗೆ ಜಾಗೃತಿ ಮೂಡಿಸಿದರು. ಹಾವುಗಳ ಬಗ್ಗೆ ಮಾಹಿತಿ ಇಲ್ಲದೇ ಅವುಗಳನ್ನು ಹಿಡಿಯುವ ಕೆಲಸಕ್ಕೆ ಕೈ ಹಾಕಬಾರದು. ಜೊತೆಗೆ, ಅವುಗಳಿಗೆ ಹಾನಿಯುಂಟು ಮಾಡಬಾರದು ಎಂದು ಮನವಿ ಮಾಡಿದರು.