ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಬಡ ಮಹಿಳೆಯರಿಂದ ಸಾಲದ ಕಂತು ಪಡೆದು ಅದಕ್ಕೆ ಯಾವುದೇ ರೀತಿಯ ರಸೀದಿಗಳನ್ನು ನೀಡದೇ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಫೈನಾನ್ಸ್ ವೊಂದರಲ್ಲಿ ಮಹಿಳೆಯರು ಸಾಲ ಪಡೆದಿದ್ದು, ಅದರ ಕಂತನ್ನು ಫೀಲ್ಡ್ ಡೆವಲಪ್ಮೆಂಟ್ ಆಫಿಸರ್(ಎಫ್.ಡಿ.ಒ)ಗೆ ನೀಡಿದ್ದಾರೆ. ಆದರೆ, ಅದಕ್ಕೆ ರಸೀದಿ ನೀಡದೇ ಸಂಸ್ಥೆಯ ಎಂಡಿಗೂ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
READ | ಶಿವಮೊಗ್ಗದಿಂದ ವಿಮಾನ ಹಾರಾಟಕ್ಕೆ ಡೇಟ್ ಫಿಕ್ಸ್, ಮುಂದಿನ ವಾರ ಸಿದ್ಧವಾಗಲಿದೆ ಡ್ರಾಫ್ಟ್
ಫೈನಾನ್ಸ್ ನಲ್ಲಿ ಎಫ್.ಡಿ.ಒ ಆಗಿ ಕೆಲಸ ಮಾಡುವ ಸಿರಿಗೆರೆ ಗ್ರಾಮದ ರವೀಶ್ ಎಂಬುವವರು ಮೋಸ ಮಾಡಿದ್ದು ಅವರ ವಿರುದ್ಧ ದೂರು ನೀಡಲಾಗಿದೆ. ಇವರು ಎಂಟು ತಿಂಗಳುಗಳಿಂದ 25-30 ಹಳ್ಳಿಗಳಲ್ಲಿ ಬಡ ಮಹಿಳೆಯರಿಂದ ಮಾಸಿಕ ಕಂತುಗಳನ್ನು ಪಡೆದಿದ್ದಾರೆ. ಆದರೆ, ಸಂಸ್ಥೆಗೆ ಅದನ್ನು ಪಾವತಿಸಿಲ್ಲ. ಮಹಿಳೆಯರಿಗೂ ರಸೀದಿ ನೀಡಿಲ್ಲ. ಗ್ರಾಹಕರು ಕೇಳಿದರೂ ನಾನಾ ಸಬೂಬುಗಳನ್ನು ನೀಡಿದ್ದಾರೆ.
93,593 ಲಕ್ಷ ರೂ. ವಂಚನೆ
ರವೀಶ್ ಅವರ ವಿಚಾರ ಸಂಸ್ಥೆಯವರಿಗೆ ಗೊತ್ತಾಗಿದ್ದೇ ವಿಚಾರಿಸಿದ್ದಾರೆ. ಆಗ 33,451 ರೂಪಾಯಿ ಮರು ಪಾವತಿಸಿದ್ದಾನೆ. ಗ್ರಾಹಕರಿಂದ ಒಟ್ಟು 1.27 ಲಕ್ಷ ರೂಪಾಯಿ ಪಡೆದಿದ್ದಾನೆ. ಇನ್ನುಳಿದ ಹಣವನ್ನು ನೀಡುವಂತೆ ಸಂಸ್ಥೆಯವರು ಕೇಳಿದ್ದು, ವಾಪಸ್ ನೀಡದೇ ಸಂಸ್ಥೆಗೆ ಯಾವ ಮಾಹಿತಿಯನ್ನೂ ನೀಡದೇ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಜತೆಗೆ, ಜನವರಿ 26ರಂದು ಮೇಲಾಧಿಕಾರಿಗಳಿಗೆ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾನೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
https://www.suddikanaja.com/2021/12/21/online-fraud-by-a-accused-case-registered-in-shimoga-cyber-police-station/