ಸುದ್ದಿ ಕಣಜ.ಕಾಂ | CITY | AASHRAYA MANE
ಶಿವಮೊಗ್ಗ: ಆಶ್ರಯ ಯೋಜನೆಯ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಡಿ ಆಯ್ಕೆಯಾದ ಫಲಾನುಭವಿಗಳಲ್ಲಿ 40 ಮಂದಿಗೆ ಮಹಾನಗರ ಪಾಲಿಕೆ ನೋಟಿಸ್ ನೀಡಿದೆ.
ವಿರುಪಿನಕೊಪ್ಪದಲ್ಲಿ ಸರ್ವೇ ನಂ.6ರಲ್ಲಿ ನಿರ್ಮಾಣಗೊಂಡ 627 ನಿವೇಶನಗಳಿಗೆ ಆಯ್ಕೆಯಾದ ಫಲಾನುಭವಿಗಳಲ್ಲಿ 40 ಜನ ಫಲಾನುಭವಿಗಳು ಮನೆಗಳ ನಿರ್ಮಾಣ ಬಾಬ್ತು ರೂ. 40,000 ರೂಪಾಯಿ ವಂತಿಕೆ, 70,000 ರೂಪಾಯಿ ಬ್ಯಾಂಕ್ ಸಾಲದ ಮೊತ್ತವನ್ನು ಪಾವತಿಸಿದ್ದಲ್ಲಿ ರಸೀದಿಯನ್ನು ಕಚೇರಿಗೆ ಹಾಜರುಪಡಿಸಲು ಹಾಗೂ ಫಲಾನುಭವಿಗಳೂ ಮನೆಗಳಲ್ಲಿ ವಾಸವಿಲ್ಲದ ಬಗ್ಗೆ ಮಾಹಿತಿ ನೀಡಲು ಎರಡು ಬಾರಿ ನೋಟಿಸ್ ನೀಡಲಾಗಿದ್ದು, ಇದುವರೆಗೆ ಉತ್ತರ ನೀಡಿರುವುದಿಲ್ಲ ಎಂದು ಪಾಲಿಕೆ ಪ್ರಕಟಣೆ ತಿಳಿಸಿದೆ.
2021ರ ಆಗಸ್ಟ್ 5ರಲ್ಲಿ ಅಂತಿಮ ನೋಟಿಸ್ ನೀಡಿದ್ದರೂ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ. ಮನೆಗಳಲ್ಲೂ ವಾಸವಿರುವುದಿಲ್ಲ. ಹೀಗಾಗಿ, ಅಂತಹವರಿಗೆ ನೋಟಿಸ್ ನೀಡಲಾಗಿದೆ.
ಯಾರಾರಿಗೆ ನೋಟಿಸ್?
ನಿವೇಶನ ಸಂಖ್ಯೆ: 47- ನೀಲಾಬಾಯಿ ವಿಜಯಕುಮಾರ್, ನಿ.ಸಂ.: 84- ಸರೋಜಮ್ಮ ಸುಂದರ್, ನಿ.ಸಂ.: 109- ಗೀತಬಾಯಿ ಎಸ್. ರಾಜು, ನಿ.ಸಂ.: 158- ಶಂಕ್ರಮ್ಮ ಶಿವಣ್ಣ, ನಿ.ಸಂ.: 194-ಲಲಿತಮ್ಮ ಕಾಂತರಾಜ್, ನಿ.ಸಂ.: 210- ಚಿತ್ರ ಅಣ್ಣಪ್ಪ, ನಿ.ಸಂ.: 211 – ಚಿತ್ರ ಗೋಪಾಲ, ನಿ.ಸಂ.: 264- ಜಯಮ್ಮ ಕರಿಬಸಪ್ಪ, ನಿ.ಸಂ.: 267- ವಸಂತ ತುಳಸಿ, ನಿ.ಸಂ.: 268- ರಶ್ಮಿಬಾನು ಹುಸೇನ್ ಬಾಷ, ನಿ.ಸಂ.: 275- ಪದ್ಮ ರಾಜಪ್ಪ, ನಿ.ಸಂ.: 275- ಕವಿತ ಮಂಜು, ನಿ.ಸಂ.: 296- ಜಿ.ಶೋಭಾ ಬಸವರಾಜ್, ನಿ.ಸಂ.: 318- ಸೀತಾ ಶರವಣ, ನಿ.ಸಂ.: 322- ಮಮತಾ ಎಚ್.ವಿ. ವಾಗೀಶ್, ನಿ.ಸಂ.: 325- ಜಯಮ್ಮ ಗೋವಿಂದಪ್ಪ, ನಿ.ಸಂ.: 342- ಜಯಮ್ಮ ಜಯರಾಮ, ನಿ.ಸಂ.: 343- ಚಂದ್ರಿಕಾ ಮಂಜುನಾಥ, ನಿ.ಸಂ.: 355- ಶಾಂತಮ್ಮ ಕೆ.ಆರ್ಮುಗಂ, ನಿ.ಸಂ.: 358- ಹೇಮಲತಾ ಡಿ. ಜಗದೀಶ್ ಎಚ್.ಕೆ., ನಿ.ಸಂ.: 359- ತುಳಸಿ ಉಮೇಶ್, ನಿ.ಸಂ.: 361- ಚಂದ್ರಮ್ಮ ಕುಮಾರ್ ಎನ್.ಓ., ನಿ.ಸಂ.: 368- ಪುಷ್ಪ ಕೃಷ್ಣಪ್ಪ, ನಿ.ಸಂ.: 371- ಶಾರದ ಧಾಮಯ್ಯ, ನಿ.ಸಂ.: 383- ಸಾವಿತ್ರಮ್ಮ ವೆಂಕಟೇಶ್, ನಿ.ಸಂ.: 392- ಜಯಲಕ್ಷ್ಮೀ ಶ್ರೀನಿವಾಸ್, ನಿ.ಸಂ.: 396- ಪರಿಮಳ ಹೆಚ್.ಎಸ್. ಯೋಗೇಶ್ವರ, ನಿ.ಸಂ.: 397- ಉಷಾ ರಾಜು, ನಿ.ಸಂ.: 488- ಕಮಲಮ್ಮ ವಿಜೇಂದ್ರಗೌಡ, ನಿ.ಸಂ.: 495- ರಾಧಮ್ಮ ಆರ್ಮುಗಂ, ನಿ.ಸಂ.: 498- ನಂಜಮ್ಮ ವಿ.ಶೇಖರಪ್ಪ, ನಿ.ಸಂ.: 521- ದಿಶಾ ಅಬ್ದುಲ್ ಘನಿ, ನಿ.ಸಂ.: 532- ಪ್ರಭಾವತಿ ಕೆ.ವಿ. ಯಜ್ಞ ನಾರಾಯಣ ಕೆ.ಎಸ್., ನಿ.ಸಂ.: 563- ದೇವಮ್ಮ ಲಕ್ಷ್ಮೀನಾರಾಯಣ, ನಿ.ಸಂ.: 566- ಮಲ್ಲಿಕಾ ರಾಮು, ನಿ.ಸಂ.: 589- ಜಯಲಕ್ಷ್ಮೀ ಪೈ ಲಕ್ಷ್ಮೀಕಾಂತ್ ಎನ್., ನಿ.ಸಂ.: 620- ಮಮತಾ ಸಂತೋಷ, ನಿ.ಸಂ.: 625- ಉಷಾ ಕೆ. ಪಳನಿ, ನಿ.ಸಂ.: 654- ಉಮಾ ರುದ್ರಪ್ಪ, ನಿ.ಸಂ.: 659- ಲತಾ ಟಿ. ತೀರ್ಥಪ್ಪ.
READ | ನಾಳೆ ಶಿವಮೊಗ್ಗದ ಈ ಪ್ರದೇಶಗಳಲ್ಲಿ ಪವರ್ ಕಟ್
ಈ ಎಲ್ಲ 40 ಫಲಾನುಭವಿಗಳಿಗೆ ಆಶ್ರಯ ಸಮಿತಿ ಸಭೆಯಲ್ಲಿ ಮನೆಗಳನ್ನು ರದ್ದು ಪಡಿಸಲು ತೀರ್ಮಾನ ಕೈಗೊಂಡಿದ್ದು, ಈ ಪತ್ರಿಕಾ ಪ್ರಕಟಣೆಗೊಂಡ 30 ದಿನಗಳೊಳಗೆ ದಾಖಲೆಗಳನ್ನು ಹಾಜರುಪಡಿಸಲು ಹಾಗೂ ಈ ವಿಚಾರವಾಗಿ ಆಕ್ಷೇಪಣೆ/ ತಕರಾರು ಇದ್ದಲ್ಲಿ ಅಗತ್ಯ ದೃಢೀಕೃತ ದಾಖಲೆಗಳೊಂದಿಗೆ ಸಲ್ಲಿಸಲು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
https://www.suddikanaja.com/2021/04/05/gopishettikoppa-invites-you-to-apply-for-shelter-soon/