ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ಕಾರಿನಲ್ಲಿಟ್ಟಿದ್ದ 18 ಲಕ್ಷ ರೂಪಾಯಿಯನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರೇಕಂದವಾಡಿ ಗ್ರಾಮದ ನಿವಾಸಿಗಳಾದ ಅನಿಲ್ ಕುಮಾರ್ (23), ಜಿ.ನಾಗರಾಜ್ ಬಂಧಿತರು. ಇವರ ಬಳಿಯಿಂದ 17,95,000 ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
READ | ವಾಕಿಂಗ್ಗೆ ಬಂದ ವ್ಯಕ್ತಿಯ ಮೇಲೆ ಕಲ್ಲು ತೂರಾಟ ಮಾಡಿದ್ದ ಇಬ್ಬರ ಬಂಧನ, ಹಲ್ಲೆಯ ಕಾರಣ ಬಿಚ್ಚಿಟ್ಟ ಆರೋಪಿಗಳು
18 ಲಕ್ಷ ರೂ. ಕಳವಾಗಿದ್ದು ಹೇಗೆ?
ಚಿತ್ರದುರ್ಗ ಜಿಲ್ಲೆಯ ಹಿರೇಕಂದವಾಡಿ ಗ್ರಾಮದ ವಾಸಿಯೊಬ್ಬರು ಹೊಳೆಹೊನ್ನೂರು ಠಾಣೆ ವ್ಯಾಪ್ತಿಯ ಹೊಸಕೊಪ್ಪ ಗ್ರಾಮದ ಗೋಪಾಲಯ್ಯ ಅವರಿಂದ ಅಡಿಕೆಯನ್ನು ಖರೀದಿ ಮಾಡಿದ್ದಾರೆ. ಅವರಿಗೆ 18 ಲಕ್ಷ ರೂಪಾಯಿಗಳನ್ನು ಕೊಟ್ಟುಬರುವಂತೆ ತಿಳಿಸಿ ಬುಲೇರೋ ವಾಹನದಲ್ಲಿ ಚಾಲಕ ಅನಿಲನೊಂದಿಗೆ 3 ಜನರನ್ನು ಕಳುಹಿಸಿದ್ದಾರೆ.
ಮಾರ್ಚ್ 2ರಂದು ಮಧ್ಯಾಹ್ನ ಹೊಸಕೊಪ್ಪ ಗ್ರಾಮದಲ್ಲಿ ಬುಲೇರೋ ವಾಹನವನ್ನು ನಿಲ್ಲಿಸಿ ಅದರ ಕ್ಯಾಬಿನ್ ನಲ್ಲಿ 18 ಲಕ್ಷ ರೂ.ಗಳನ್ನು ಇರಿಸಿ ಊಟಕ್ಕೆಂದು ಹೋಗಿ, ಊಟ ಮುಗಿಸಿಕೊಂಡು ಬಂದು ನೋಡಿದಾಗ ಕ್ಯಾಬಿನ್ ನಲ್ಲಿ ಇಟ್ಟಿದ್ದ 18 ಲಕ್ಷ ರೂ.ಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಹೊಳೆಹೊನ್ನೂರು ಠಾಣೆ ಪಿಎಸ್.ಐ ಮತ್ತು ಸಿಬ್ಬಂದಿಯ ತಂಡ ಆರೋಪಿಗಳನ್ನು ಪತ್ತೆ ಹಚ್ಚಿದೆ.
https://www.suddikanaja.com/2020/12/31/car-fraud-by-a-person-in-shivamogga-do-you-know-where-it-found/