ಸುದ್ದಿ ಕಣಜ.ಕಾಂ | KARNATAKA | AGUMBE GHAT
ಶಿವಮೊಗ್ಗ: ಆಗುಂಬೆ ಘಾಟಿಯಲ್ಲಿ ಲಘು ಮತ್ತು ಭಾರಿ ವಾಹನಗಳ ಸಂಚಾರಕ್ಕೆ ಮಾರ್ಚ್ 5ರಿಂದ 15ರ ವರೆಗೆ ನಿಷೇಧ ಹೇರಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿಯಲ್ಲಿ ರಸ್ತೆ ರಿಪೇರಿ ಕಾಮಗಾರಿ ನಡೆಯಲಿದ್ದು, ವಾಹನಗಳ ಸಂಚಾರ ಸ್ಥಗಿತಗೊಳಿಸುವುದು ಅನಿವಾರ್ಯ ಎಂದು ಮನಗಂಡು ಜಿಲ್ಲಾಡಳಿತ ನಿರ್ಧಾರ ಕೈಗೊಂಡಿದೆ. ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿ ಶಿವಮೊಗ್ಗ- ತೀರ್ಥಹಳ್ಳಿ- ಆಗುಂಬೆ- ಉಡುಪಿ- ಮಂಗಳೂರು ಮಾರ್ಗಕ್ಕೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ.
ಕಾಮಗಾರಿ ನಡೆಯುವ ಸಂದರ್ಭದಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 7ರ ವರೆಗೆ ಕೆಳಕಂಡ ಪರ್ಯಾಯ ಮಾರ್ಗಗಳಲ್ಲಿ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿ ಆದೇಶಿಸಲಾಗಿದೆ.
READ | ಚಿನ್ನಾಭರಣ ಪ್ರಿಯರಿಗೆ ಶಾಕ್, ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆ
ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗದ ಮಾಹಿತಿ
- ಲಘು ವಾಹನಗಳು | ಶಿವಮೊಗ್ಗ-ತೀರ್ಥಹಳ್ಳಿ- ಕೊಪ್ಪ-ಶೃಂಗೇರಿ- ಮಾಳಾ ಘಾಟ್- ಕಾರ್ಕಳ-ಉಡುಪಿ- (ಎನ್ಎಚ್ 169).
- ಭಾರಿ ವಾಹನಗಳು | ಶಿವಮೊಗ್ಗ- ಆಯನೂರು- ಆನಂದಪುರ- ಸಾಗರ- ಹೊನ್ನಾವರ (ಎನ್ಎಚ್ 69 ಅಥವಾ ಎನ್ಎಚ್ 206).
https://www.suddikanaja.com/2020/12/19/road-transport-and-highways-minister-nitin-gadkari-inaugurated-689-crore-project-in-shivamogga/