ಸುದ್ದಿ ಕಣಜ.ಕಾಂ | DISTRICT | RAIN FALL
ಶಿವಮೊಗ್ಗ: ನಗರದಲ್ಲಿ ಗುರುವಾರ ರಾತ್ರಿ ಸುರಿದ ಮಳೆ ಭಾರೀ ಅನಾಹುತವನ್ನು ಸೃಷ್ಟಿಸಿದೆ. ಏಕಾಏಕಿ ಗುಡುಗು ಸಹಿತ ವರ್ಷಧಾರೆ ಆರಂಭವಾಗಿದ್ದು, ಹಲವೆಡೆ ಮರಗಳು ಧರೆಗುರುಳಿವೆ.
READ | ಭದ್ರಾ ನಾಲೆಗಳಿಗೆ ನೀರು ಬಂದ್ ಗೆ ಡೇಟ್ ಫಿಕ್ಸ್, ಜಲಾಶಯದಲ್ಲಿರುವ ನೀರಿನ ಪ್ರಮಾಣವೆಷ್ಟು?
ಕೋರ್ಟ್ ವೃತ್ತ, ಬಸವೇಶ್ವರ ವೃತ್ತ, ಜಿಲ್ಲಾಧಿಕಾರಿ ಹಿಂಭಾಗ, ಉರ್ದು ಶಾಲೆ ಸಮೀಪ ಹೀಗೆ ನಾನಾ ಕಡೆಗಳಲ್ಲಿ ದೊಡ್ಡ ದೊಡ್ಡ ಮರಗಳೇ ಉರುಳಿವೆ.
ರಸ್ತೆಗಳಲ್ಲಿ ನೀರು ನಿಂತಿದ್ದು, ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವ ರಸ್ತೆಗಳಂತೂ ಅಕ್ಷರಶಃ ಕೃಷಿ ಹೊಂಡಗಳಾಗಿವೆ ಮಾರ್ಪಟ್ಟಿವೆ.