ಸಚಿವ ಸ್ಥಾನಕ್ಕೆ‌ ಅಧಿಕೃತವಾಗಿ‌ ರಾಜೀನಾಮೆ‌‌ ನೀಡಿದ ಕೆ.ಎಸ್.ಈಶ್ವರಪ್ಪ, ಸಿಎಂಗೆ ನೀಡಿದ ಪತ್ರದಲ್ಲಿ‌ ಏನಿದೆ?

 

 

ಸುದ್ದಿ ಕಣಜ.ಕಾಂ | KARNATAKA | POLITICAL NEWS
ಬೆಂಗಳೂರು: ಭಾರಿ ಚರ್ಚೆ, ವಾದ ವಿವಾದಗಳ ನಡುವೆ ಕೆ.ಎಸ್.ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ‌ ಶುಕ್ರವಾರ ರಾಜೀನಾಮೆ ಸಲ್ಲಿಸಿದರು.
ರೇಸ್ ಕೋರ್ಸ್ ಬಳಿಯ ಸಿ‌ಎಂ‌ ಬಸವರಾಜ್ ಬೊಮ್ಮಾಯಿ‌ ಅವರ ನಿವಾಸಕ್ಕೆ ತೆರಳಿದ ಈಶ್ವರಪ್ಪ ಅವರು‌‌ ರಾಜೀನಾಮೆ ಪತ್ರವನ್ನು ‌ಸಲ್ಲಿಸಿದರು. ಈ ವೇಳೆ, ಈಶ್ವರಪ್ಪ ಜತೆ ಸಚಿವರಾದ ಆರಗ ಜ್ಞಾನೇಂದ್ರ,‌ ಎಂ.ಟಿ.ಬಿ‌.ನಾಗರಾಜ್, ಭೈರತಿ ಬಸವರಾಜು, ರಮೇಶ್‌ ಜಾರಕಿಹೊಳಿ‌ ಇದ್ದರು.

READ | ರಾಜೀನಾಮೆ‌ ಘೋಷಿಸಿದ ಸಚಿವ ಕೆ.ಎಸ್.ಈಶ್ವರಪ್ಪ

ಭಾರಿ ಬೆಂಬಲಿಗರೊಂದಿಗೆ ತೆರಳಿದ ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ ಅವರು ಸ್ವಕ್ಷೇತ್ರ‌ ಶಿವಮೊಗ್ಗದಿಂದ ಬೆಂಗಳೂರಿಗೆ ಭಾರಿ ಬೆಂಬಲಿಗರೊಂದಿಗೆ ತೆರಳಿದರು. ಕಾರು ರ‌್ಯಾಲಿಯೊಂದಿಗೆ ಕಾರ್ಯಕರ್ತರೊಂದಿಗೆ ಹೊರಟಿದ್ದ‌‌ ಅವರ ಪರವಾಗಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ‌ ಈಶ್ವರಪ್ಪ ಅವರ ಹೆಸರು ಕೇಳಿಬಂದಿತ್ತು. ಸರ್ಕಾರಿ ಕಾಮಗಾರಿಯೊಂದರಲ್ಲಿ ಪರ್ಸಂಟೇಜ್ ಕೇಳಿದ್ದಾರೆಂಬ ಆರೋಪ ಕೇಳಿಬಂದಿತ್ತು. ಇವೆಲ್ಲವುಗಳ ನಡುವೆ ವಿಪಕ್ಷದವರು ಪ್ರತಿಭಟನೆಗಿಳಿದಿದ್ದರು. ಹೀಗಾಗಿ, ಈಶ್ವರಪ್ಪ ಅವರು ಗುರುವಾರ ಸಂಜೆ ಶಿವಮೊಗ್ಗದಲ್ಲಿ ತುರ್ತು ಮಾಧ್ಯಮಗೋಷ್ಢಿ ಕರೆದು ಜಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಬೆಂಗಳೂರಿಗೆ ತೆರಳಿ ರಾಜೀನಾಮೆಯನ್ನು ಮುಖ್ಯಮಂತ್ರಿಗೆ ಸಲ್ಲಿಸಿದ್ದಾರೆ.

IMG 20220416 WA0000
ಕೆ.ಎಸ್.ಈಶ್ವರಪ್ಪ ರಾಜೀನಾಮೆ ಪತ್ರದ ಪ್ರತಿ

ರಾಜೀನಾಮೆ ಪತ್ರದಲ್ಲಿ ಏನಿದೆ?
ಶಾಸಕ ಕೆ.ಎಸ್.ಈಶ್ವರಪ್ಪ ಅವರು ರಾಜೀನಾಮೆ ಪತ್ರ ಸಲ್ಲಿಸುದ್ದು, ಅದು ಅತ್ಯಂತ ಕ್ಲುಪ್ತವಾಗಿದೆ. ‘ನನ್ನ ಸ್ವ ಇಚ್ಛೆಯಿಂದ ಸಚಿವ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸುತ್ತಿದ್ದೇನೆ’ ಎಂದು ಬರೆದಿದ್ದಾರೆ.

error: Content is protected !!