ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಆನಂದರಾವ್ ಬಡಾವಣೆಯ ಎರಡನೇ ಕ್ರಾಸಿನ ಮನೆಯ ಮುಂದೆ ನಿಲುಗಡೆ ಮಾಡಲಾಗಿದ್ದ ಬೈಕ್ ಅನ್ನು ಕಳ್ಳತನ ಮಾಡಲಾಗಿದೆ.
ಸಿಬ್ಗತ್ ಉಲ್ಲಾ ಎಂಬುವವರ ಬಿಳಿ ಬಣ್ಣದ ಹೊಂಡಾ ಎವಿಟರ್ ದ್ವಿಚಕ್ರ ವಾಹನ ಕಳ್ಳತನ ಮಾಡಲಾಗಿದೆ. ಏಪ್ರಿಲ್ 29ರಂದು ಬೈಕ್ ಕಳವಾಗಿದ್ದು, ಸ್ನೇಹಿತರ ಮನೆ, ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳ ಬಳಿ ಹುಡುಕಾಟ ನಡೆಸಲಾಗಿದೆ. ಎಲ್ಲಿಯೂ ಸಿಗದಕ್ಕೆ ಮೇ 5ರಂದು ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.