ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಚೋರ್ ಬಚ್ಚಾ ಅಲಿಯಾಸ್ ತಬ್ರೇಜ್ ಎಂಬಾತನಿಂದ ಚಾಕು ಇರಿತಕ್ಕೆ ಒಳಗಾಗಿದ್ದ ಆಟೋ ಚಾಲಕ ಅಣ್ಣಾನಗರ ನಿವಾಸಿ ಮೆಹಬೂಬ್ ಪಾಶಾ(52) ಚಿಕಿತ್ಸೆ ಫಲಿಸದೇ ಸೋಮವಾರ ಮೃತಪಟ್ಟಿದ್ದಾನೆ.
ಪುತ್ರನ ಮೇಲೆ ಹಲ್ಲೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮೆಹಬೂಬ್ ಪಾಶಾ ಚೋರ್ ಬಚ್ಚಾಗೆ ಪ್ರಶ್ನಿಸಿದ್ದಾನೆ. ಜುಲೈ 7ರಂದು ಚಾಕುವಿನಿಂದ ಇರಿದಿದ್ದ. ಗಾಯಗೊಂಡಿದ್ದ ಪಾಶಾಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
READ | ಕೋಟ್ಯಂತರ ಮೌಲ್ಯದ ಚಿನ್ನ, ಬೆಳ್ಳಿಗೆ ಕಳವು, ಪ್ಲ್ಯಾನ್ ಬಳಿಕವೇ ಕನ್ನ
ಏನಿದು ವೈಷಮ್ಯ?
ಮೆಹಬೂಬ್ ಪಾಶಾನ ಹಿರಿಯ ಪುತ್ರ ಜುನೈದ್ ಪಾಶಾ ಹಾಗೂ ಚೋರ್ ಬಚ್ಚಾ ನಡುವೆ ಕದ್ದ ಮೊಬೈಲ್ ವಿಚಾರವಾಗಿ ಜಗಳವಾಗಿತ್ತು. ಜುನೈದ್ ಈ ಮುಂಚೆ ಬಚ್ಚಾ ಮೇಲೆ ಹಲ್ಲೆ ಮಾಡಿದ್ದ. ಅದರ ಪ್ರತಿಕಾರವಾಗಿ ಹಲ್ಲೆ ಮಾಡಿದ್ದು, ಆಗ ಚಾಕು ಇರಿತವಾಗಿತ್ತು.