ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ತೀರ್ಥಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಕೈಗೊಂಡು ಇಬ್ಬರನ್ನು ಬಂಧಿಸಿದ್ದಾರೆ. ಅಂದಾಜು ₹70,000 ಮೌಲ್ಯದ ಒಟ್ಟು 2 ಕೆ.ಜಿ 300 ಗ್ರಾಂ ತೂಕದ ಒಣ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಶಿವಮೊಗ್ಗ ನಿವಾಸಿ ನಿಸಾರ್ ಅಲಿಯಾಸ್ ವಿಲ್ಸನ್ ಜೇಮ್ಸ್(55), ಬೆಂಗಳೂರಿನ ಅಲೆಕ್ಸ್ ಅಲಿಯಾಸ್ ಅಲೆಕ್ಸಾಂಡರ್ (42) ಎಂಬುವವರನ್ನು ಬಂಧಿಸಲಾಗಿದೆ.
ಮಂಗಳೂರು- ಶಿವಮೊಗ್ಗ ಗಾಂಜಾ ಪೂರೈಕೆ
ಮಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿರುವ ಖಾಸಗಿ ಬಸ್ಸಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದಾರೆಂದು ಬಂದ ಖಚಿತ ಮಾಹಿತಿಯ ಮೇರೆಗೆ ತೀರ್ಥಹಳ್ಳಿ ಡಿವೈಎಸ್.ಪಿ ಮತ್ತು ತೀರ್ಥಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿಯ ತಂಡವು ಕೈಮರ ಬಸ್ ಸ್ಯಾಂಡ್ ಗೆ ತಲುಪಿ ಅಲ್ಲಿಗೆ ಬಂದ ಬಸ್ ಅನ್ನು ತಪಾಸಣೆಗೊಳಪಡಿಸಿ ಬಸ್ ನಲ್ಲಿದ್ದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಇವರ ವಿರುದ್ಧ ಎನ್.ಡಿ.ಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
READ | RRB, SSC, POLICE ಹುದ್ದೆ ನೇಮಕಾತಿಗೆ ಶಿವಮೊಗ್ಗದಲ್ಲಿ ಟ್ರೈನಿಂಗ್
ವಿಚಾರಣೆಗೊಳಪಡಿಸಿದಾಗ ಪ್ರಕರಣಕ್ಕೆ ಟ್ವಿಸ್ಟ್
ಆರೋಪಿತರನ್ನು ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಈ ಹಿಂದಿನಿಂದಲೂ ಕೇರಳದ ಎಂಪರರ್ ಇಮ್ಯಾನುಯಲ್ ಚರ್ಚ್ ನಲ್ಲಿ ಪ್ರಾರ್ಥನೆಗೆ ಹೋಗುತ್ತಿದ್ದು, 6 ತಿಂಗಳ ಹಿಂದೆ ಕೇರಳ ರಾಜ್ಯದ ಅಜೀಲ್ (37) ಮತ್ತು ಸಜ್ಜು ಫ್ರಾನ್ಸಿಸ್ (40) ಅವರು ಚರ್ಚ್ ವಿರುದ್ಧವಾಗಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆಂದು ಅಜೀಲ್ ಮೇಲೆ ಸುಳ್ಳು ಪ್ರಕರಣವನ್ನು ದಾಖಲಿಸಲು ಸಂಚು ರೂಪಿಸಿ ಅಜೀಲ್ ನನ್ನು ಶಿವಮೊಗ್ಗಕ್ಕೆ ಬರುವಂತೆ ಮಾಡಿ, ಆತನ ಮೇಲೆ ಗಾಂಜಾ ಸಾಗಾಟ ಪ್ರಕರಣ ದಾಖಲಾಗುವ ರೀತಿಯಲ್ಲಿ ಆತನು ಪ್ರಯಾಣಿಸುತ್ತಿದ್ದ ಬಸ್ ನಲ್ಲಿ ಮಾದಕ ವಸ್ತು ಗಾಂಜಾವನ್ನು ಇರಿಸಿರುತ್ತೇವೆ. ಸಜ್ಜು ಫ್ರಾನ್ಸಿಸ್ ನನ್ನು ಕೊಲೆ ಮಾಡಿಸಲು ಸ್ನೇಹಿತನಾದ ಅಫ್ರೋಜ್ ಅಹಮ್ಮದ್ ಗೆ ₹80,000 ಮತ್ತು ಸಜ್ಜು ಫ್ರಾನ್ಸಿಸ್ ನ ಫೋಟೋ ವಿಳಾಸವನ್ನು ಕೊಟ್ಟು ಗಾಡಿಯಲ್ಲಿ ಗುದ್ದಿ ಕೊಲೆ ಮಾಡಲು ಹೇಳಿರುತ್ತೇವೆ. ಆದರೆ ಕೊಲೆಯ ಸಂಚನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ ಎಂದು ನೀಡಿದ ಹೇಳಿಕೆಯ ಮೇರೆಗೆ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಈ ಪ್ರಕರಣ ಸಂಬಂಧ ಬೆಂಗಳೂರು ಮೂಲದ ಅಫ್ರೋಜ್ ಅಹಮ್ಮದ್(37) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ಬಳಿಯಿಂದ ₹80,000ನಗದು ಹಣ ಮತ್ತು ಮೊಬೈಲ್ ಫೊನ್ ವಶಕ್ಕೆ ಪಡೆದು ಸದರಿ ಮೂರು ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿರುತ್ತದೆ.
https://suddikanaja.com/2021/08/09/ganja-raid-in-bhadravthi/