ಸುದ್ದಿ ಕಣಜ.ಕಾಂ | DISTRICT | GUDDEKAL JATRE
ಶಿವಮೊಗ್ಗ: ಗುಡ್ಡೇಕಲ್ ಶ್ರೀ ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಆಡಿಕೃತ್ತಿಕ ಹರೋಹರ ಜಾತ್ರೆಯು ಜುಲೈ 23ರಂದು ನಡೆಯಲಿದ್ದು, ಈ ಪ್ರಯುಕ್ತ ಪರ್ಯಾಯ ಮಾರ್ಗಗಳಲ್ಲಿ ಸಂಚಾರಕ್ಕೆ ಅವಕಾಶ ನೀಡಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.
ಜಾತ್ರೆಗೆ ಶಿವಮೊಗ್ಗ ಮಾತ್ರವಲ್ಲದೇ ನಾನಾ ಕಡೆಗಳಿಂದ ಭಕ್ತಾದಿಗಳು ಕಾರು, ದ್ವಿಚಕ್ರ, ಬಸ್ ಸೇರಿದಂತೆ ವಿವಿಧ ವಾಹನಗಳು ಬರುವುದರಿಂದ ಮಾರ್ಗ ಬದಲಾವಣೆ ಮಾಡಿ ಆದೇಶಿಸಲಾಗಿದೆ.
ಹೊಳೆಹೂನ್ನೂರು ಸರ್ಕಲ್’ನಿಂದ ಗುರುಪುರದ ಯಲವಟ್ಟಿ ಕ್ರಾಸ್’ವರೆಗೆ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
READ | ಶಿವಮೊಗ್ಗದಿಂದಲೇ 3 ಜಿಲ್ಲೆಗಳಿಗೆ ಸಾರವರ್ಧಿತ ಅಕ್ಕಿ ಪೂರೈಕೆ, ಆರೋಗ್ಯಕ್ಕೇನು ಪ್ರಯೋಜನ?
ಪರ್ಯಾಯ ಮಾರ್ಗಗಳ ಮಾಹಿತಿ
- ಬೆಂಗಳೂರು, ಭದ್ರಾವತಿ, ಎನ್.ಆರ್.ಪುರ ಕಡೆಯಿಂದ ಬರುವ ಎಲ್ಲ ಭಾರಿ ವಾಹನ, ಬಸ್ಗಳು ಮತ್ತು ಸಿಟಿ ಬಸ್’ಗಳು ಹಾಗೂ ಕಾರು ವಾಹನಗಳು ಬೈಪಾಸ್ ರಸ್ತೆ ಮೂಲಕ ಸಂಚರಿಸತಕ್ಕದ್ದು.
- ಶಿವಮೊಗ್ಗ ನಗರದಿಂದ ಬೆಂಗಳೂರು, ಭದ್ರಾವತಿ, ಚಿತ್ರದುರ್ಗ, ಹೊಳೆಹೊನ್ನೂರು ಹೋಗುವ ಎಲ್ಲ ಭಾರಿ ವಾಹನ, ಬಸ್, ಸಿಟಿ ಬಸ್ಗಳು, ಕಾರು ಬೈಪಾಸ್ ರಸ್ತೆ ಮುಖಾಂತರ ಪ್ರಯಾಣಿಸಬಹುದು
- ಚಿತ್ರದುರ್ಗ ಹೊಳೆಹೊನ್ನೂರಿನಿಂದ ಬರುವ ಮತ್ತು ಹೋಗುವ ಎಲ್ಲ ಭಾರಿ ವಾಹನ ಮತ್ತು ಬಸ್ಗಳು ಭದ್ರಾವತಿ ಬೈಪಾಸ್ ರಸ್ತೆ ಮಾರ್ಗವಾಗಿ ಶಿವಮೊಗ್ಗ ನಗರಕ್ಕೆ ಬರತಕ್ಕದ್ದು.
- ಚಿತ್ರದುರ್ಗ ಹೊಳೆಹೊನ್ನೂರಿನಿಂದ ಬರುವ ಮತ್ತು ಹೋಗುವ ಎಲ್ಲ ಲಘು ವಾಹನಗಳು ಯಲವಟ್ಟಿ ದೊಡ್ಡ ತಾಂಡ ಕ್ರಾಸ್’ನಿಂದ, ಯಲವಟ್ಟಿ ಸಣ್ಣ ತಾಂಡ, ಯಲವಟ್ಟಿ ಮಾರ್ಗವಾಗಿ ಮಲವಗೊಪ್ಪ ಮೂಲಕ ಬಿ.ಎಚ್.ರಸ್ತೆಗೆ ಸೇರಿಕೂಂಡು ಬೈಪಾಸ್ ರಸ್ತೆಯ ಮಾರ್ಗವಾಗಿ ಶಿವಮೊಗ್ಗ ನಗರಕ್ಕೆ ಬರುವುದು.
- ಶಿವಮೊಗ್ಗ ನಗರದಿಂದ ಹೊಳೆಹೊನ್ನೂರು ಚಿತ್ರದುರ್ಗಕ್ಕೆ ಹೋಗು ಲಘು ವಾಹನಗಳು ಬೈಪಾಸ್ ರಸ್ತೆಯ ಮೂಲಕ ಮಲವಗೊಪ್ಪದ ಯಲವಟ್ಟಿ ಕ್ರಾಸ್’ನಿಂದ ದೊಡ್ಡತಾಂಡ ಕ್ರಾಸ್-ಹೊಳೆಹೊನ್ನೂರು ಚಿತ್ರದುರ್ಗಕ್ಕೆ ಹೋಗುವುದು.
- ಹರಿಹರ ಹೊನ್ನಾಳಿಯಿಂದ ಬರುವ ಭಾರಿ ವಾಹನ, ಬಸ್’ಗಳು 100 ಅಡಿ ರಸ್ತೆ ವಿನೋಬನಗರ ಮಾರ್ಗವಾಗಿ ಸಂಚರಿಸತಕ್ಕದ್ದು
- ಶಿವಮೊಗ್ಗ ನಗರದಿಂದ ಹೊಳೆಹೊನ್ನೂರು, ಚನ್ನಗಿರಿ, ಚಿತ್ರದುರ್ಗಕ್ಕೆ ಹೋಗುವ ಮತ್ತು ಬರುವ ಭಾರಿ ವಾಹನಗಳು ಸಂಗೊಳ್ಳಿ ರಾಯಣ್ಣ ಸರ್ಕಲ್, ಹೊನ್ನಾಳಿ ರಸ್ತೆ, ಹೊಳಲೂರು ತುಂಗಭದ್ರ ಸೇತುವೆ ಸನ್ಯಾಸಿಕೋಡಮಗ್ಗಿ, ಹೊಳೆಹೊನ್ನೂರು ಮಾರ್ಗವಾಗಿ ಸಂಚರಿಸುವುದು.
https://suddikanaja.com/2022/07/07/guddekal-jatre-at-shimoga/