ಸುದ್ದಿ ಕಣಜ.ಕಾಂ| DISTRICT | 26 AUG 2022
ಶಿವಮೊಗ್ಗ: ಗಾಂಧಿ ಬಜಾರಿನ ತರಕಾರಿ ಮಾರ್ಕೆಟ್ ನಲ್ಲಿ ಪ್ರೇಮ್ ಸಿಂಗ್ ಎಂಬುವವರಿಗೆ ಚಾಕು ಇರಿದವರ ಮೇಲೆ ಉಪಾ(UAPA- Unlawful Activities (Prevention) Act) ಅಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ.
ಯಾರ್ಯಾರ ಮೇಲೆ ಕಾಯ್ದೆಯ ಅಸ್ತ್ರ?
ತನ್ವೀರ್ ಅಹಮ್ಮದ್ ಅಲಿಯಾಸ್ ತನ್ನು (22), ನದೀಮ್ ಫೈಸಲ್ ಅಲಿಯಾಸ್ ನದೀಮ್ (25), ಅಬ್ದುಲ್ ರೆಹಮಾನ್ ಅಲಿಯಾಸ್ ಅಬು (25) ಅವರುಗಳನ್ನು ದಸ್ತಗಿರಿ ಮಾಡಿದ್ದು, ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ.
ಪ್ರಕರಣದ ಮತ್ತೊಬ್ಬ ಆರೋಪಿ ಮೊಹಮ್ಮದ್ ಜಬೀ ಅಲಿಯಾಸ್ ಚರ್ಬಿ(30) ಈತನು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾನೆ. ಇವರೆಲ್ಲರ ಮೇಲೆ ಯುಎಪಿಎ ಕಾಯ್ದೆ ವಿಧಿಸಲಾಗಿದೆ.
READ | ಶಿವಮೊಗ್ಗದ ಮೂವರು ರೌಡಿಗಳಿಗೆ ಒಂದು ವರ್ಷ ಜೈಲು, ಬಚ್ಚನ್ ಕಲಬುರಗಿ ಜೈಲಿಗೆ ಶಿಫ್ಟ್
ನಡೆದಿದ್ದೇನು? UAPA ಸೇರ್ಪಡೆಗೇನು ಕಾರಣ?
ಆಗಸ್ಟ್ 15ರಂದು ಶಿವಮೊಗ್ಗ ಟೌನ್ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗಾಂಧಿಬಜಾರ್ ನ ತರಕಾರಿ ಮಾರುಕಟ್ಟೆಯ ಹತ್ತಿರ ಮನೆಯ ಕಡೆ ಹೋಗುತ್ತಿದ್ದ ಅಶೋಕ ರಸ್ತೆಯ ಐದನೇ ಕ್ರಾಸ್ ನಿವಾಸಿ ಪ್ರೇಮ್ ಸಿಂಗ್(20) ಎಂಬಾತನಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದರು. ಠಾಣೆಯಲ್ಲಿ ಐಪಿಸಿ ಕಲಂ 307 ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಯುಎಪಿಎ ಅನ್ನು ಸೇರ್ಪಡೆ ಮಾಡಲಾಗಿದೆ. ಈ ಮೂಲಕ ಪ್ರಕರಣದ ಗಂಭೀರತೆಯೂ ಹೆಚ್ಚಾಗಿದೆ.
ಪ್ರಕರಣದ ತನಿಖೆಯಲ್ಲಿ ಆರೋಪಿತರು ಮೂಲಭೂತವಾದದ ಪ್ರಭಾವಕ್ಕೆ ಒಳಗಾಗಿ ಕೃತ್ಯವೆಸಗಿರುವುದು ಹಾಗೂ ತನಿಖೆಯಲ್ಲಿ THE UNLAWFUL ACTIVITIES (PREVENTION) ACT-1967 ಕಾಯ್ದೆಯಲ್ಲಿನ ಅಂಶಗಳು ಕಂಡು ಬಂದಿದ್ದರಿಂದ ಪ್ರಕರಣದಲ್ಲಿ ಕಾಯ್ದೆಯನ್ನು ಅಳವಡಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗುತ್ತಿದೆ.
https://suddikanaja.com/2022/03/07/investigation-into-the-murder-of-bajarang-dal-activist-harsha-become-more-serious-due-to-unlawful-activities-restriction-amendment-act-uapa/