HIGHLIGHTS
- ನಿಷೇಧಿತ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆನ್ನಲಾದ ಇಬ್ಬರ ಬಂಧನ
- ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ
ಸುದ್ದಿ ಕಣಜ.ಕಾಂ | KARNATAKA | 20 SEP 2022
ಬೆಂಗಳೂರು: ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಿಪಕ್ಷದವರಿಗೆ ಟಾಂಗ್ ನೀಡಿದ್ದಾರೆ.
READ | ಐಸಿಸ್’ನೊಂದಿಗೆ ಶಿವಮೊಗ್ಗ ಲಿಂಕ್, ಶಾರೀಕ್ ಸಹಚರರು ಅರೆಸ್ಟ್, ಕಿಂಗ್ ಪಿನ್ ಎಸ್ಕೇಪ್
ಶಿವಮೊಗ್ಗದಲ್ಲಿ ನಡೆದ ಘಟನೆಯ ತನಿಖೆಯನ್ನು ಎನ್.ಐ.ಎಗೆ ವಹಿಸಿದ್ದನ್ನು ಕೆಲವರು ಪ್ರಶ್ನಿಸಿದ್ದರು. ಅವರಿಗೆ ಈಗ ಉತ್ತರ ಸಿಕ್ಕಿದೆ. ಶಿವಮೊಗ್ಗದಲ್ಲಿ ISIS ಜೊತೆಗೆ ಸಂಪರ್ಕ ಇರುವವರು ಸಿಕ್ಕಿದ್ದಾರೆ ಎಂಬ ವಿಚಾರವನ್ನು ನಂಬಲಾಗದು. ಐಎಸ್.ಐಎಸ್ ನಿಷೇಧಿತ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಇಬ್ಬರನ್ನು ಬಂಧಿಸಲಾಗಿದೆ. ಅವರ ಹಿಂದೆ ಇನ್ನಷ್ಟು ಜನರಿದ್ದಾರೆ ಎಂಬುವುದು ತನಿಖೆಯ ಬಳಿಕ ಬೆಳಕಿಗೆ ಬರಲಿದೆ ಎಂದು ಹೇಳಿದರು.
ಕೆಲವು ಪ್ರಕರಣಗಳನ್ನು ಎನ್.ಐ.ಎಗೆ ವಹಿಸಬೇಕು ಎನ್ನುವುದಕ್ಕೆ ವಿರೋಧಿಸಿದವರಿಗೆ ಉತ್ತರ ಸಿಕ್ಕಿದೆ. ಪೊಲೀಸರ ಈ ಕಾರ್ಯಕ್ಕೆ ಶ್ಲಾಘನೆ ತಿಳಿಸುತ್ತೇನೆ ಎಂದು ತಿಳಿಸಿದರು.
https://suddikanaja.com/2022/06/06/karnataka-police-have-initiated-an-investigation-into-the-illegal-operation-of-prohibited-satellite-signals-in-the-forest-areas-of-the-states-coastal-and-chikkamagalur-district/