HIGHLIGHTS
- ಬಿಗಿಭದ್ರತೆಯ ನಡುವೆ ಆರಂಭಗೊಂಡ ಹಿಂದೂ ಸಂಘಟನಾ ಮಹಾಮಂಡಳಿ ಗಣಪತಿಯ ಮೆರವಣಿಗೆ
- ರಾಜಬೀದಿ ಉತ್ಸವಕ್ಕೆ ಹರಿದುಬಂದ ಜನಸಾಗರ, ಗಣಪತಿಯ ದರ್ಶನ ಪಡೆದ ಭಕ್ತರು
- ಸಾರ್ವಜನಿಕರಿಗಾಗಿ ಉಪಹಾರ, ತಂಪು ಪಾನೀಯದ ವ್ಯವಸ್ಥೆ
ಸುದ್ದಿ ಕಣಜ.ಕಾಂ | TALUK | 09 SEP 2022
ಶಿವಮೊಗ್ಗ: ಹಿಂದೂ ಸಂಘಟನಾ ಮಹಾಮಂಡಳಿಯು ಪ್ರತಿಷ್ಠಾಪನೆ ಮಾಡಿರುವ ಗಣಪತಿಯ ರಾಜಬೀದಿ ಉತ್ಸವ ಆರಂಭಗೊಂಡಿದ್ದು, ಲಕ್ಷಾಂತರ ಜನರು ಇದರಲ್ಲಿ ಭಾಗಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೇ ವಿವಿಧೆಡೆಯಿಂದ ಭಕ್ತ ಸಮೂಹ ನಗರಕ್ಕೆ ಆಗಮಿಸಿದೆ.
ಶಾಂತಿಯುತವಾಗಿ ಗಣಪತಿ ಮೆರವಣಿಗೆ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಲಕ್ಷಾಂತರ ಜನರು ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಅವರ ಆತಿಥ್ಯಕ್ಕೆ ಶಿವಮೊಗ್ಗ ಕೂಡ ಸಿದ್ಧವಾಗಿದೆ. ಅತ್ಯಂತ ಅದ್ಧೂರಿಯಾಗಿ ಹಿಂದೂ ಮಹಾಮಂಡಲ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ನಡೆಯುತ್ತಿದೆ.
| ಎಸ್.ಎನ್.ಚನ್ನಬಸಪ್ಪ, ಆಡಳಿತ ಪಕ್ಷದ ನಾಯಕ, ಮಹಾನಗರ ಪಾಲಿಕೆ
ಬೆಳಗ್ಗೆ ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಯನ್ನು ಆರಂಭಿಸಿದ್ದು, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್’ದುದ್ದಕ್ಕೂ ಜನಸಾಗರವೇ ನೆರೆದಿದೆ. ಎರಡು ವರ್ಷಗಳ ಬಳಿಕ ರಾಜಬೀದಿ ಉತ್ಸವ ನಡೆಯುತ್ತಿರುವುದರಿಂದ ಸಹಜವಾಗಿಯೇ ಎಲ್ಲರಲ್ಲೂ ಸಂಭ್ರಮ ಮನೆ ಮಾಡಿದೆ.
ರಾಜಬೀದಿ ಉತ್ಸವದಲ್ಲಿ ಶಾಸಕರಾದ ಕೆ.ಎಸ್.ಈಶ್ವರಪ್ಪ, ಡಿ.ಎಸ್.ಅರುಣ್ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.
READ | ಶಿವಮೊಗ್ಗದಲ್ಲಿ ಹಬ್ಬದ ವಾತಾವರಣ, ಖಾಕಿ ಕಾವಲಿನಲ್ಲಿ ಇಡೀ ನಗರ, ಈ ಸಲದ ವಿಶೇಷಗಳೇನು?
ತಂಪು ಪಾನೀಯ, ಉಪಹಾರದ ವ್ಯವಸ್ಥೆ
ರಾಜಬೀದಿ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಜನರ ಅನುಕೂಲಕ್ಕಾಗಿ ಉಪಹಾರ, ತಂಪು ಪಾನೀಯವನ್ನು ವಿತರಣೆ ಮಾಡಲಾಗುತ್ತಿದೆ.
ಬಿಗಿ ಪೊಲೀಸ್ ಭದ್ರತೆ
ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಬಂದೋಬಸ್ತ್ ಕರ್ತವ್ಯಕ್ಕೆ 2 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 19 ಪೊಲೀಸ್ ಉಪಾಧೀಕ್ಷಕರು, 46 ಪೊಲೀಸ್ ನಿರೀಕ್ಷಕರು, 71 ಪೊಲೀಸ್ ಉಪನಿರೀಕ್ಷಕರು, 1970 ಪೊಲೀಸ್ ಸಿಬ್ಬಂದಿಗಳು, 700 ಗೃಹರಕ್ಷಕ ದಳ ಸಿಬ್ಬಂದಿ, 1 ಆರ್ ಎ ಎಫ್ ಕಂಪನಿ (200 ಅಧಿಕಾರಿ ಮತ್ತು ಸಿಬ್ಬಂದಿಗಳು), 15 ಕೆಎಸ್ಆರ್. ಪಿ ತುಕಡಿಯ ( 300 ಅಧಿಕಾರಿ ಮತ್ತು ಸಿಬ್ಬಂದಿಗಳು), 15 ಡಿ ಎ ಆರ್ ತುಕಡಿ(120 ಅಧಿಕಾರಿ ಹಾಗೂ ಸಿಬ್ಬಂದಿ)ಗಳನ್ನು ನಿಯೋಜಿಸಲಾಗಿರುತ್ತದೆ.
https://suddikanaja.com/2022/09/07/high-police-security-bhadravatis-hindu-mahasabha-ganapati-procession/