ಸುದ್ದಿ ಕಣಜ.ಕಾಂ | SHIMOGA CITY | 23 OCT 2022
ಶಿವಮೊಗ್ಗ(shivamogga) ತಾಲೂಕಿನ ಮತ್ತೂರು (Mattur) ರಸ್ತೆಯಲ್ಲಿರುವ ಮಳಲಿಕೊಪ್ಪದ ತೋಟವೊಂದರಲ್ಲಿ ವ್ಯಕ್ತಿಯ ಮುಖಕ್ಕೆ ಖಾರ ಎರಚಿ ಹಲ್ಲೆ ಮಾಡಿರುವ ಘಟನೆ ಸಂಭವಿಸಿದೆ.
READ | ಆಯನೂರು ಬಳಿ ಭೀಕರ ಅಪಘಾತ, ಒಬ್ಬ ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ
ಮಳಲಿಕೊಪ್ಪ (Malalikoppa) ನಿವಾಸಿ ಅರುಣ್ ಕುಮಾರ್ (38) ಎಂಬುವವರ ಮೇಲೆ ಹಲ್ಲೆ ಮಾಡಲಾಗಿದೆ. ಅರುಣ್ ಅವರ್ ತೋಟಕ್ಕೆ ಹೋದಾಗ ಕೆಲ ದುಷ್ಕರ್ಮಿಗಳು ಮುಖಕ್ಕೆ ಟಾರ್ಚ್ ಹಾಕಿದ್ದಾರೆ. ನಂತರ, ಮುಖಕ್ಕೆ ಖಾರ ಎರಚಿ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ.
ಕಿರುಚಿಕೊಂಡಿದ್ದೇ ಅಕ್ಕಪಕ್ಕದವರ ದೌಡು, ದುಷ್ಕರ್ಮಿಗಳು ಪರಾರಿ
ಅರುಣ್ ಕುಮಾರ್ ಅವರು ಕಿರುಚಿಕೊಳ್ಳಲು ಆರಂಭಿಸಿದ್ದೇ ಅಕ್ಕಪಕ್ಕದ ಜಮೀನಿನವರು ಇಲ್ಲಿಗೆ ದೌಡಾಯಿಸಿದ್ದಾರೆ. ಜನರು ಬರುತ್ತಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಅಲ್ಲಿಂದ ಪರಸರಿಯಾಗಿದ್ದಾರೆ. ತುಂಗಾನಗರ (Tunganagar)ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://suddikanaja.com/2022/10/23/blood-donation-at-shivamogga-on-releasing-of-gandhada-gudi-movie/