ಸುದ್ದಿ ಕಣಜ.ಕಾಂ| DISTRICT | 29 OCT 2022
ಶಿವಮೊಗ್ಗ(Shivamogga): ನಗರ ಮತ್ತು ವಿವಿಧೆಡೆ ಬಸವಕೇಂದ್ರ ( Basavakendra) ವತಿಯಿಂದ 16ನೇ ವರ್ಷದ ಚಿಂತನಾ ಕಾರ್ತಿಕ (Chintana Kartika)-2022 ಕಾರ್ಯಕ್ರಮವನ್ನು ಅಕ್ಟೋಬರ್ 29 ರಿಂದ ನವೆಂಬರ್ 27ವರೆಗೆ ಆಯೋಜಿಸಲಾಗಿದೆ ಎಂದು ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ (Dr.Basava Marulsidda swamiji) ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಣರ ತತ್ವಗಳನ್ನು ಪಸರಿಸುವ ಉದ್ದೇಶದಿಂದ ಕಳೆದ 16 ವರ್ಷಗಳಿಂದ ಚಿಂತನಾ ಕಾರ್ತಿಕ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಈ ಬಾರಿಯೂ ಒಂದು ತಿಂಗಳು ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮ ಅ.29ರಂದು ಸಂಜೆ 6.30 ಗಂಟೆಗೆ ಬಸವಕೇಂದ್ರದಲ್ಲಿ ನಡೆಯಲಿದೆ ಎಂದು ಹೇಳಿದರು.
ಮಾಜಿ ಸಚಿವ ಎಸ್.ಎಸ್.ಪಾಟೀಲ್ ಅವರು ಚಿಂತನಾ ಕಾರ್ತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಸವಕೇಂದ್ರದ ಅಧ್ಯಕ್ಷ ಜಿ. ಬೆನಕಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ಉಪಾಧ್ಯಕ್ಷ ಎಚ್.ಎಲ್. ಷಡಾಕ್ಷರಿ, ಅಕ್ಕನ ಬಳಗದ ಅಧ್ಯಕ್ಷ ಜಯಮ್ಮ ಕುಬಸದ್ ಆಗಮಿಸುವರು.
READ | ಮಲೆನಾಡಿನಲ್ಲಿ ಮೊಳಗಿನ ಕೋಟಿ ಕಂಠ ಗಾಯನ, ಶಿವಮೊಗ್ಗದಲ್ಲಿ ಎಷ್ಟು ಜನ ನೋಂದಾಯಿಸಿಕೊಂಡಿದ್ದರು?
ಎಲ್ಲ ಯಾವ ಕಾರ್ಯಕ್ರಮ?
- ಅ. 30 ರಂದು ಬೆಳಗ್ಗೆ 11 ಗಂಟೆಗೆ ಮಡಿಕೆ ಚೀಲೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಂಗಕರ್ಮಿ ಆರ್. ಗಣೇಶ್ ಕೆಂಚನಾಲ ಉಪನ್ಯಾಸ ನೀಡುವರು. ಸಂಜೆ 6.30 ಕ್ಕೆ ಯಲವಟ್ಟಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಂ. ವಿರೂಪಾಕ್ಷಪ್ಪ ಉಪನ್ಯಾಸ ನೀಡುವರು.
- ನ. 7ರಂದು ಮಲ್ಲೇಶ್ವರ ನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಗನೂರು ಶ್ರೀ ಶಿವಬಸವ ಮಹಾಸ್ವಾಮಿ ಕುರಿತು ಉಪನ್ಯಾಸಕ ಕಲೀಂ ಉಲ್ಲಾ ಉಪನ್ಯಾಸ ನೀಡುವರು.
- ನ.8ರಂದು ಸವಳಂಗ ರಸ್ತೆಯ ಕೃಷಿ ನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಾಣೂರು ಚನ್ನಪ್ಪ ಉಪನ್ಯಾಸ ನೀಡುವರು.
- ನ. 9 ರಂದು ದೇವಕಾತಿಕೊಪ್ಪದಲ್ಲಿ ನಡೆಯುವ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಕೆ.ಜಿ. ವೆಂಕಟೇಶ್ ಉಪನ್ಯಾಸ ನೀಡುವರು.
- ನ. 10 ರಂದು ಸೋಮಿನಕೊಪ್ಪದಲ್ಲಿ ಡಾ. ಶಂಭು ಬಳಿಗಾರ ಉಪನ್ಯಾಸ ನೀಡುವರು.
- ನ. 11 ರಂದು ಗೋಪಾಲಗೌಡ ಬಡಾವಣೆಯಲ್ಲಿ ಉಪನ್ಯಾಸಕ ಚನ್ನಯ್ಯ ಬಿ. ಮಾರವಳ್ಳಿ, ನ. 12 ರಂದು ಕೆ.ಎಚ್.ಬಿ. ಕಾಲೋನಿಯಲ್ಲಿ ಬಾರಂದೂರು ಪ್ರಕಾಶ್ ಅವರು ಉಪನ್ಯಾಸ ನೀಡುವರು.
- ನ. 19 ರಂದು ಶರಾವತಿ ನಗರದಲ್ಲಿ ಶೀಲಾ ಸುರೇಶ್, 20 ರಂದು ಬಸವಕೇಂದ್ರದಲ್ಲಿ ಡಾ.ಬಿ.ಜಿ. ಧನಂಜಯ, 21 ರಂದು ಅಬ್ಬಲಗೆರೆ ರತ್ನಗಿರಿ ಲೇಔಟ್ ನಲ್ಲಿ ಶ್ರೀರಂಜಿನಿ ದತ್ತಾತ್ರಿ, ನ. 23 ರಂದು ವಿನೋಬ ನಗರದಲ್ಲಿ ಅನಿತಾ ಜವಳಿ, 24 ರಂದು ತೇವರಚಟ್ನಹಳ್ಳಿಯಲ್ಲಿ ಡಾ. ಎಂ. ಬಸವರಾಜಪ್ಪ, 25 ರಂದು ಜಯದೇವ ಬಡಾವಣೆಯಲ್ಲಿ ಡಾ. ಡಿ.ಬಿ. ಶಿವರುದ್ರಪ್ಪ ಉಪನ್ಯಾಸ ನೀಡುವರು.
- ಈ ಎಲ್ಲ ಉಪನ್ಯಾಸಗಳು ಪ್ರತಿದಿನ ಸಂಜೆ 6.30 ಕ್ಕೆ ನಡೆಯಲಿದ್ದು, ಆಯಾ ಬಡಾವಣೆಯ ಪ್ರಮುಖರು ಆತಿಥ್ಯ ವಹಿಸಲಿದ್ದು, ಎಲ್ಲರೂ ಭಾಗವಹಿಸಬೇಕು. ನ. 26 ರಂದು ಸಂಜೆ 6.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಬಸವಕೇಂದ್ರದ ಅಧ್ಯಕ್ಷ ಜಿ. ಬೆನಕಪ್ಪ, ಪ್ರಮುಖರಾದ ಪ್ರೊ. ಚಂದ್ರಶೇಖರ್, ಎಚ್.ಎನ್. ಮಹಾರುದ್ರ, ರುದ್ರಮುನಿ ಸಜ್ಜನ್, ಜಯಮ್ಮ ಕುಬಸದ್, ಚಂದ್ರಶೇಖರ ತಳಗಿಹಾಳ ಇದ್ದರು.
https://suddikanaja.com/2022/10/27/shimoga-police-interduced-mcctns-mobile-crime-and-criminal-tracking-network-system-to-identify-criminals/