HIGHLIGHTS
- ರಾಜ್ಯ ಸರ್ಕಾರಿ ನೌಕರರಿಂದ ಪುಣ್ಯಕೋಟಿ ದತ್ತು ಯೋಜನೆಗೆ ಧನ ಸಹಾಯ
- ಎಲ್ಲ ರಾಜ್ಯ ಸರ್ಕಾರಿ ನೌಕರರಿಂದ ವೃಂದವಾರು ದೇಣಿಗೆ ನೀಡಲು ಸರ್ವಾನುಮತದ ನಿರ್ಣಯ
- ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನೌಕರರ ಸಂಘದಿಂದ ಒಪ್ಪಿಗೆ ಪತ್ರ ಸಲ್ಲಿಕೆ
ಸುದ್ದಿ ಕಣಜ.ಕಾಂ | KARNATAKA | 15 OCT 2022
ಬೆಂಗಳೂರು: ರಾಜ್ಯ ಸರ್ಕಾರ(state government)ವು ಜಾರಿಗೆ ತಂದಿರುವ ಪುಣ್ಯಕೋಟಿ ದತ್ತು ಯೋಜನೆ(punyakoti adoption scheme)ಗೆ ರಾಜ್ಯ ಸರ್ಕಾರಿ ನೌಕರರ ಸಂಘವು ಅಗತ್ಯ ಸಾಥ್ ನೀಡಲು ಮುಂದಾಗಿದೆ.
ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸರ್ಕಾರದ ಇತರೆ ಸಂಘ-ಸಂಸ್ಥೆಗಳ ನೌಕರರು ದೇಣಿಗೆ ನೀಡುವ ಒಪ್ಪಿಗೆ ಪತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಕಾಮಧೇನು, ಪುಣ್ಯಕೋಟಿ ಸಂತತಿ ರಕ್ಷಣೆಗೆ ಸ್ವಇಚ್ಚೆಯಿಂದ ಒಂದು ಬಾರಿಗೆ ದೇಣಿಗೆ ನೀಡಿ ಗೋವುಗಳನ್ನು ಪೋಷಿಸುವ ಕಾರ್ಯದಲ್ಲಿ ರಾಜ್ಯದ ಎಲ್ಲ ಇಲಾಖೆಗಳ ಸರ್ಕಾರಿ ನೌಕರರು ಹಾಗೂ ಇತರೆ ಸಂಸ್ಥೆಗಳ ನೌಕರರು ಸಹಕರಿಸುವಂತೆ ನೌಕರರಿಗೆ ಮಾಡಿದ್ದು, ಅದಕ್ಕೆ ಸಂಘವು ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು.
‘ಪುಣ್ಯಕೋಟಿ ದತ್ತು ಯೋಜನೆ’ಗೆ ತನು- ಮನ- ಧನ ಸಹಕಾರದೊಂದಿಗೆ ಯೋಜನೆಯ ಯಶಸ್ಸಿಗೆ ಅಗತ್ಯ ಸಹಕಾರ ನೀಡಲಿದೆ.
| ಸಿ.ಎಸ್.ಷಡಾಕ್ಷರಿ, ರಾಜ್ಯಾಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ
ಯಾರಿಂದ ಎಷ್ಟು ದೇಣಿಗೆ?
ಪುಣ್ಯಕೋಟಿ ದತ್ತು ಯೋಜನೆಯ ಸಂಬಂಧ ಇತ್ತೀಚಿಗೆ ಏರ್ಪಡಿಸಲಾಗಿದ್ದ ನೌಕರರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ ಹಾಗೂ ನಿಗಮ-ಮಂಡಳಿ ಮತ್ತು ಇತರೆ ಸಂಸ್ಥೆಗಳ ವೃಂದ ಸಂಘಗಳ ಸಭೆಯಲ್ಲಿ ವಿವರವಾಗಿ ಸಮಾಲೋಚನೆ ನಡೆಸಿದ ನಂತರ ‘ಎ’ ವೃಂದದ ಅಧಿಕಾರಿಗಳು ಒಂದು ಬಾರಿಗೆ ₹11,000, ‘ಬಿ’ ವೃಂದದ ಅಧಿಕಾರಿಗಳು ₹4,000 ಹಾಗೂ ‘ಸಿ’ವೃಂದದ ನೌಕರರು ₹400 ದೇಣಿಗೆಯಾಗಿ ನೀಡಲು ಸರ್ವಾನುಮತದ ನಿರ್ಣಯ ಕೈಗೊಂಡಿರುತ್ತದೆಂದು ತಿಳಿಸಿದರು.
READ | ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, “ಕ್ಯಾನ್ಸರ್’ಕಾರಕವಲ್ಲ” ವರದಿ ಬಗ್ಗೆ ಆರಗ ಜ್ಞಾನೇಂದ್ರ ಹೇಳಿದ್ದೇನು?
ಯಾವಾಗೆಲ್ಲೆ ಸರ್ಕಾರಿ ನೌಕರರ ಸಂಘದಿಂದ ಸಹಾಯ?
ಇದಲ್ಲದೇ ಈ ಹಿಂದೆಯೂ ನೌಕರರ ಸಂಘವು ಅನೇಕ ಸಾಮಾಜಿಕ ಜವಾಬ್ದಾರಿಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿರುವುದನ್ನು ನೆನಪಿಸಿದರು.
- 1997ರಲ್ಲಿ ಆಂಧ್ರಪ್ರದೇಶದಲ್ಲಿ ಸಂಭವಿಸಿದ ಚಂಡಮಾರುತ ಪರಿಹಾರ ನಿಧಿ, 1999ರಲ್ಲಿ ಒರಿಸ್ಸಾದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ, 1999ರಲ್ಲಿ ನಡೆದ ಕಾರ್ಗಿಲ್ ಯುದ್ಧಕ್ಕೆ ಪರಿಹಾರ ನಿಧಿ, 2001ರಲ್ಲಿ ಗುಜರಾತ್ನಲ್ಲಿ ಭೂಕಂಪ ಸಂಭವಿಸಿದಾಗಿ ಭೂಕಂಪ ಪರಿಹಾರ ನಿಧಿಗಾಗಿ ಪ್ರತಿಬಾರಿಯೂ ತಲಾ ಒಂದು ದಿನದ ವೇತನವನ್ನು ನೀಡಲಾಗಿದೆ. 2001ರಲ್ಲಿ ರಾಜ್ಯಕ್ಕೆ ಬರಗಾಲ ಸಂಭವಿಸಿದಾಗ ಜಾನುವಾರುಗಳಿಗೆ ಮೇವು ಮತ್ತು ನೀರು ಪೂರೈಕೆಗಾಗಿ ನೌಕರರ ತುಟ್ಟಿಭತ್ಯೆಯ ಬಾಕಿ ಮೊತ್ತವನ್ನು ಸರ್ಕಾರಕ್ಕೆ ನೀಡಲಾಗಿದೆ ಎಂದು ಸಿ.ಎಸ್.ಷಡಕ್ಷರಿ ತಿಳಿಸಿದರು.
- 2003ರಲ್ಲಿ ಉತ್ತರ ಕರ್ನಾಟಕ ರೈತರ ಶ್ರೇಯೋಭಿವೃದ್ಧಿಗಾಗಿ ಕೃಷ್ಣ ಮೇಲ್ದಂಡೆ ಯೋಜನೆಯ ನೀರಾವಿ ಕಾಮಗಾರಿಗೆ ಒಂದು ದಿನದ ವೇತನ, ಮಹಾರಾಷ್ಟ್ರದ ಲಾತೂರ್’ನಲ್ಲಿ ಸಂಭವಿಸಿದ ಭೂಕಂಪ ಸಂತ್ರಸ್ತರ ನೆರವಿಗಾಗಿ ಒಂದು ದಿನದ ವೇತನವನ್ನು ಹಾಗೂ 2005ರಲ್ಲಿ ಸುನಾಮಿ ನೆರೆಹಾವಳಿಗೆ ತುಟ್ಟಿಭತ್ಯೆಯ ಬಾಕಿ ಮೊತ್ತ, 2019ರಲ್ಲಿ ನೆರೆಹಾವಳಿಯಿಂದ ಸಂತ್ರಸ್ತರಾದವರಿಗೆ ಪರಿಹಾರ ಒದಗಿಸಲು ಒಂದು ದಿನದ ವೇತನ, 2018ರಲ್ಲಿ ರಾಜ್ಯದ ಕೊಡಗು ಮತ್ತು ಮಂಗಳೂರಿನಲ್ಲಿ ಸಂಭವಿಸಿದ ನೆರೆಹಾವಳಿ ಸಂತ್ರಸ್ಥರ ಪರಿಹಾರ ಕಾರ್ಯಕ್ಕಾಗಿ ಒಂದು ದಿನದ ವೇತನ.
- 2020ರಲ್ಲಿ ಅತಿವೃಷ್ಟಿಯಿಂದ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಸಂತ್ರಸ್ತರ ನೆರವಿಗಾಗಿ ಒಂದು ದಿನದ ವೇತನ, 2021ರಲ್ಲಿ ಕೋವಿಡ್ ಸಾಂಕ್ರಾಮಿಕ ನಿಯಂತ್ರಣಕ್ಕಾಗಿ ಸರ್ಕಾರಕ್ಕೆ ಒಂದು ದಿನದ ವೇತನ, 2020-21ರಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನೀಡಬೇಕಾಗಿದ್ದ ಮೂರು ಕಂತುಗಳ ತುಟ್ಟಿಭತ್ಯೆ ಬಾಕಿ ಮೊತ್ತವನ್ನು ಕೋವಿಡ್-19ರ ಸರ್ಕಾರದ ನಿಧಿಗೆ ಅರ್ಪಿಸಲಾಗಿದೆ.
- ಪ್ರತಿವರ್ಷ ಹಮ್ಮಿಕೊಳ್ಳುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಯಾ ಜಿಲ್ಲೆಗಳ ಸರ್ಕಾರಿ ನೌಕರರಿಂದ ಒಂದು ದಿನದ ವೇತನವನ್ನು ನೀಡಲಾಗುತ್ತಿದೆ. ಇಷ್ಟೇ ಅಲ್ಲದೇ ಇಂತಹ ಅನೇಕ ಜನಪರ ಕಾರ್ಯಕ್ರಮಗಳಲ್ಲಿ ಆರ್ಥಿಕ ಸಹಕಾರ ನೀಡಿದೆ ಎಂದು ಷಡಕ್ಷರಿ ತಿಳಿಸಿದರು.
ರಾಜ್ಯದ ಎಲ್ಲ ಜಿಲ್ಲೆಗಳ ನೌಕರರ ಸಂಘದ ಜಿಲ್ಲಾಧ್ಯಕ್ಷರು, ವೃಂದ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಏನಿದು ಪುಣ್ಯ ಕೋಟಿ ದತ್ತು ಯೋಜನೆ?
ರಾಜ್ಯದಲ್ಲಿನ ನಿರ್ಗತಿಕ, ಅನಾರೋಗ್ಯದಿಂದ ಬಳಲುತ್ತಿರುವ, ಅಶಕ್ತ ಹಾಗೂ ವಯಸ್ಸಾದ ಜಾನುವಾರುಗಳನ್ನು ಹಾಗೂ ರೈತರು ಸಾಕಲಾಗದ ಹಸು, ಕರುಗಳನ್ನು ಪೋಷಿಸಲು ರಾಜ್ಯ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ.
ನೀವು ದೇಣಿಗೆ ನೀಡಬಹುದು
- ಜಾನುವಾರುಗಳನ್ನು ದತ್ತು ತೆಗೆದುಕೊಳ್ಳಬೇಕಾದರೆ, ಮೇವು, ಪೌಷ್ಟಿಕಾಂಶದ ಪೂರಕಗಳು, ಆರೋಗ್ಯ ತಪಾಸಣೆ ಮತ್ತು ಔಷಧಗಳನ್ನು ಒದಗಿಸಬಹುದು
- ಪ್ರತಿ ಜಾನುವಾರಿಗೆ ಒಂದು ವರ್ಷಕ್ಕೆ ₹11,000, ದಾನಿಗಳು 3 ತಿಂಗಳುಗಳು, 6 ತಿಂಗಳುಗಳು, 9 ತಿಂಗಳುಗಳು ಅಥವಾ ಒಂದು ವರ್ಷದಿಂದ 5 ವರ್ಷಗಳವರೆಗೆ ಬದಲಾಗುವ ಅವಧಿಯನ್ನು ಸಹ ಆಯ್ಕೆ ಮಾಡಬಹುದು.
ಗೋಶಾಲೆಗಳಿಗೆ ದೇಣಿಗೆ ನೀಡಿ ಸಹಾಯ ಮಾಡಬಹುದು
- ಜಾನುವಾರುಗಳ ನಿರ್ವಹಣಾ ವೆಚ್ಚಗಳನ್ನು ಪೂರೈಸುವುದು. ಜಾನುವಾರುಗಳನ್ನು ಸ್ವಚ್ಚಗೊಳಿಸುವುದು, ಆವರಣವನ್ನು ಸೋಂಕು ಮುಕ್ತಗೊಳಿಸುವುದು ಮುಂತಾದವು.
- ಮೂಲಸೌಕರ್ಯಗಳ ಅಭಿವೃದ್ಧಿ, ಗೋಶಾಲೆಗಳಿಗೆ ನೀರು ಕೊಯ್ಲು ರಚನೆಗಳು ಮುಂತಾದ ಮೂಲಸೌಕರ್ಯಗಳ ಅಭಿವೃದ್ಧಿ
- ಹಸುವಿನ ಸಗಣಿ ಮತ್ತು ಗೋಮೂತ್ರದಿಂದ ತಯಾರಿಸಿದ ಪರಿಸರ ಸ್ನೇಹಿ ಉತ್ಪನ್ನಗಳ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಸಕ್ರಿಯಗೊಳಿಸುವುದು.
- ಹಸುವಿಗೆ ಆಹಾರ ನೀಡಿ. ಒಂದು ದಿನಕ್ಕೆ ಹಸುವಿಗೆ ಮೇವನ್ನು ಪ್ರಾಯೋಜಿಸಲು ನೀವು ಆಯ್ಕೆ ಮಾಡಬಹುದು
- ನಿಮ್ಮ ಜೀವನದಲ್ಲಿ ಜನ್ಮದಿನಗಳು ಮತ್ತು ವಾರ್ಷಿಕೋತ್ಸವಗಳಂತಹ ವಿಶೇಷ ಸಂದರ್ಭಗಳನ್ನು ಗುರುತಿಸಲು ಸಣ್ಣ ಆದರೆ ಅರ್ಥಪೂರ್ಣ ಕೊಡುಗೆಯನ್ನು ನೀಡಲು ಇದು ಒಂದು ಅನನ್ಯ ಮಾರ್ಗವಾಗಿದೆ. ಸ್ವೀಕರಿಸಿದ ಪ್ರತಿ ರೂಪಾಯಿಯು ವ್ಯತ್ಯಾಸವನ್ನುಂಟು ಮಾಡುತ್ತದೆ.
https://suddikanaja.com/2022/09/03/abhinaya-chakraborty-actor-kiccha-sudeep-has-been-appointed-as-punyakoti-ambassador-at-karnataka/