ಸುದ್ದಿ ಕಣಜ.ಕಾಂ | POLITICAL NEWS
ಶಿವಮೊಗ್ಗ(shivamogga): ‘ಆಪರೇಷನ್ ಕಮಲ(operation lotus)’ ಪರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣಗೌಡ (Dr.KC Narayanagowda) ಬ್ಯಾಟಿಂಗ್ ಮಾಡಿದ್ದು, ಪಕ್ಷದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನಾನು ಕೂಡ ಮತ್ತೊಂದು ಪಕ್ಷದಿಂದ ಬಂದವನೇ ಆಗಿದ್ದೇನೆ. ಈ ಹಿಂದೆ ನಾನಿದ್ದ ಪಕ್ಷದಲ್ಲಿ ಅಸಮಾಧಾನವಿತ್ತು. ಅದಕ್ಕಾಗಿ ಬಿಜೆಪಿ (BJP) ಸೇರಿದ್ದೇನೆ. ಸ್ವಂತ ಇಚ್ಛೆಯಿಂದ ಪಕ್ಷ ಸೇರ್ಪಡೆಯಾಗಿರುವುದರಿಂದ ಹೇಗೆ ಆಪರೇಷನ್ ಕಮಲ ಎನ್ನಲು ಸಾಧ್ಯ?” ಎಂದು ಪ್ರಶ್ನಿಸಿದರು.
ಶಿವಮೊಗ್ಗ ನಗರದಲ್ಲಿ ಕಿಡಿಗೇಡಿಗಳಿಂದ ಶಾಂತಿಭಂಗ ಹೆಚ್ಚಾಗುತ್ತಿರುವ ಬಗ್ಗೆ ಚರ್ಚೆ ನಡೆದಿದ್ದು, ಇನ್ನುಮುಂದೆ ಸಂಪೂರ್ಣವಾಗಿ ಹತೋಟಿಗೆ ತೆಗೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಶಾಂತಿಭಂಗ ಹೆಚ್ಚಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಜೊತೆ ಚರ್ಚೆ ನಡೆಸಿದ್ದೇನೆ.
| ಡಾ.ಕೆ.ಸಿ.ನಾರಾಯಣಗೌಡ, ಜಿಲ್ಲಾ ಉಸ್ತುವಾರಿ ಸಚಿವ
ಇನ್ನೂ 25 ವರ್ಷ ಬಿಜೆಪಿ ಆಡಳಿತ
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ ಬಿಜೆಪಿ ಇನ್ನೂ 25 ವರ್ಷ ಆಡಳಿತ ನಡೆಸಲಿದೆ. ಬಿಜೆಪಿ ಸಿದ್ಧಾಂತ ಮೆಚ್ಚಿ ಪಕ್ಷಕ್ಕೆ ಬರುತ್ತಾರೆ. ಬಿ.ಎಸ್. ಯಡಿಯೂರಪ್ಪ ಉತ್ತಮ ಆಡಳಿತ ನೀಡಿದರು. ಈಗ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಅದನ್ನು ನೋಡಿ ಮೆಚ್ಚಿ ಬರುವವರಿಗೆ ಬರಬೇಡಿ ಅನ್ನಲು ಆಗುತ್ತದೆಯೇ ಎಂದರು.
https://suddikanaja.com/2022/11/01/leopard-trap-at-kyatinakoppa/