ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶ್ರೀರಾಮನಗರ ಬಡಾವಣೆಯ ವಾಸದ ಮನೆಯ ಬಾಗಿಲನ್ನು ಮುರಿದು ಬೀರುವಿನಲ್ಲಿದ್ದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ ಪ್ರಕರಣ ಸಂಬಂಧ ಆರೋಪಿಯೊಬ್ಬರನ್ನು ಬಂಧಿಸಲಾಗಿದೆ.
READ | ಶಿವಮೊಗ್ಗದ ಕ್ಲಬ್’ವೊಂದರ ಮೇಲೆ ಪೊಲೀಸರ ದಾಳಿ, ಮ್ಯಾನೇಜರ್ ಸೇರಿ 12 ಜನರ ಬಂಧನ
ಶ್ರೀರಾಮನಗರ ನಿವಾಸಿ ಗಿರೀಶ್ ಅಲಿಯಾಸ್ ಸುಣ್ಣ(38) ಬಂಧಿತ ಆರೋಪಿ. ಈತನ ಬಳಿಯಿಂದ ಅಂದಾಜು ₹2,50,000 ಮೌಲ್ಯದ 60 ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.