ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿ(ಎನ್.ಇ.ಎಸ್) ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಹಿಂದೂ ಜಾಗರಣ ವೇದಿಕೆಯ ಮೂರನೇ ತ್ರೈಮಾಸಿಕ ಪ್ರಾಂತ ಸಮ್ಮೇಳನದಲ್ಲಿ ಫೈಯರ್ ಬ್ರ್ಯಾಂಡ್ ಭೂಪಾಲ್ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ದಿಕ್ಸೂಚಿ ಭಾಷಣ ಮಾಡಿದರು.
ತಮ್ಮ ಮಾತಿನುದ್ದಕ್ಕೂ ಮುಸ್ಲಿಮರು ಹಾಗೂ ಕಾಂಗ್ರೆಸ್ ವಿರುದ್ಧ ತಮ್ಮ ಆರೋಪಗಳನ್ನು ಮಾಡಿದರು. ಹಿಂದೂಗಳು ಜಾಗೃತರಾಗಬೇಕು. ತತಕ್ಷಣ ಆಗಬೇಕಾದ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಲವ್ ಜಿಹಾದ್ (Love zihad)ಗೆ ಹಿಂದೂ ಯುವತಿಯರು ಬಲಿಯಾಗುತ್ತಿದ್ದಾರೆ. ಇದರೆಡೆಗೆ ಹೆತ್ತವರು ನಿಗಾ ವಹಿಸಬೇಕು. ಮನೆಯಲ್ಲಿ ಸಂಸ್ಕಾರ ಕಲಿಸಬೇಕು. ಮಂತಾತರದ ಶಕ್ತಿಗಳನ್ನು ತಡೆಯಬೇಕು.
ಹಿಂದೂಸ್ಥಾನವನ್ನು 2047ಕ್ಕೆ ಇಸ್ಲಾಮಿಕರಣ ಮಾಡುವ ಗುರಿ ಹೊಂದಿದೆ. ಅದನ್ನು ವಿಫಲಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ನಡೆಯುತ್ತಿರುವ ಹಿಂದೂಗಳ ಹತ್ಯೆಯೂ ಸಹ ಇಸ್ಲಾಮೀಕರಣದ ಒಂದು ಭಾಗವಾಗಿದೆ. ಹತ್ಯೆಗಳಿಗೆ ದುಷ್ಕರ್ಮಿಗಳ ಕೃತ್ಯ ಎಂಬ ಬಣ್ಣ ಬಳಿಯುವ ಪ್ರಯತ್ನ ನಡೆದಿದೆ.
ಜಗದೀಶ್ ಕಾರಂತ್, ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ, ಹಿಂದೂ ಜಾಗರಣ ವೇದಿಕೆ
- ಹೆತ್ತವರು ಮಾತ್ರ ಉಳಿದುಕೊಂಡು ಮನೆಗಳು ವೃದ್ಧಾಶ್ರಮಗಳಾಗಿ ಮಾರ್ಪಟ್ಟಿವೆ. ಇದಕ್ಕೆ ಮೂಲ ಕಾರಣ ಶಿಕ್ಷಣ ವ್ಯವಸ್ಥೆ. ಹೀಗಾಗಿ, ಮಕ್ಕಳನ್ನು ಕೆಲ ಧರ್ಮದ ಶಾಲೆಗಳಿಗೆ ಕಳುಹಿಸದೇ ಮಕ್ಕಳಿಗೆ ಸರಿಯಾದ ಸಂಸ್ಕಾರಗಳನ್ನು ಕಲಿಸಬೇಕು.
- ಕಾಂಗ್ರೆಸ್ ಅಧ್ಯಕ್ಷರಿಗೆ ಈಗ ಹಿಂದೂಗಳ ನೆನಪಾದರೆ, ಮತ್ತೊಬ್ಬರಿಗೆ ಹಿಂದೂ ಆಗುವ ಹಂಬಲ ಉಂಟಾಗಿದೆ. ಪಕ್ಷದ ಅಧ್ಯಕ್ಷರು ಹಿಂದೂಗಳನ್ನು ಎದುರು ಹಾಕಿಕೊಳ್ಳಬಾರದು. ಇಲ್ಲದಿದ್ದರೆ ಹಿಂದೂಗಳೆಂದೂ ನಿಮ್ಮನ್ನು ಕುರ್ಚಿಯ ಮೇಲೆ ಕುಳಿತುಕೊಡಲಿ ಬಿಡುವುದಿಲ್ಲ.
ಪ್ರಮುಖರಾದ ರಾಮ್ ಮನೋಹರ್ ಶಾಂತವೇರಿ, ಎಸ್.ಎನ್.ಚನ್ನಬಸಪ್ಪ, ವಾಸುದೇವ್, ಎನ್.ಜೆ.ರಾಜಶೇಖರ್, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಕೆ.ಎಸ್.ಈಶ್ವರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಪಟ್ಟಾಭಿರಾಮ್, ಡಾ.ಧನಂಜಯ್ ಸರ್ಜಿ, ಆಯನೂರು ಮಂಜುನಾಥ್ ಹಲವರು ಉಪಸ್ಥಿತರಿದ್ದರು.
https://suddikanaja.com/2022/12/25/pm-narendra-modi-talk-on-shivamoggas-entrepreneur-in-mann-ki-baat/