ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ತೀರ್ಥಹಳ್ಳಿ ಕ್ಷತ್ರೀಯ ಮರಾಠ ಸಮಾಜಕ್ಕೆ ರಾಜ್ಯ ಸರಕಾರ ಒಂದು ಎಕರೆ ಜಮೀನನ್ನು ಮಂಜೂರು ಮಾಡಿದ್ದು, ಬಹು ಕಾಲದ ಬೇಡಿಕೆಯನ್ನು ಮಾನ್ಯ ಮಾಡಿ ಆದೇಶ ಹೊರಡಿಸಿದೆ.
ಈ ಸಂಬಂಧ ರಾಜ್ಯ ಸರಕಾರ, ಕೆಲವು ಷರತ್ತುಗಳನ್ನು ವಿಧಿಸಿ ಮಂಜೂರು ಆದ ಜಮೀನನ್ನು ಸಾರ್ವಜನಿಕ ಸಮುದಾಯ ಭವನ ನಿರ್ಮಿಸಲು ಉಪಯೋಗಿಸಬೇಕು ಎಂದು ತಿಳಿಸಿದೆ.
ತೀರ್ಥಹಳ್ಳಿ ತಾಲೂಕು ಕ್ಷತ್ರೀಯ ಮರಾಠ ಸಮಾಜಕ್ಕೆ ನಿವೇಶನ ಒದಗಿಸಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮರಾಠ ಮುಖಂಡರು ಮನವಿ ಸಲ್ಲಿಸಿದ್ದರು.
READ | ಬಂಗಾರದ ಬೆಲೆಯಲ್ಲಿ ಮತ್ತೆ ಏರಿಕೆ
ಎಲ್ಲಿದೆ ಜಾಗ?
ತಾಲೂಕಿನ ಸುರುಳೆ ಬಾಳೇಬೈಲು ಗ್ರಾಮದಲ್ಲಿ ಜಾಗವನ್ನು ಗುರುತಿಸಿದ್ದು, ಮರಾಠ ಸಮಾಜವು ಸದರಿ ಭೂಮಿಯನ್ನು ಸಮುದಾಯ ಭವನವನ್ನು ನಿರ್ಮಿಸಿ, ವಿವಾಹ ಹಾಗೂ ಇತರ ಸಮಾರಂಭ ಗಳನ್ನು ಆಯೋಜಿಸಿ ಬಳಸಿಕೊಳ್ಳಲು ನಿರ್ದೇಶಿಸಲಾಗಿದೆ.
ಮರಾಠ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸಲು ಭೂಮಿ ಮಂಜೂರು ಮಾಡಿಸಲು ಶ್ರಮಿಸಿದ ತೀರ್ಥಹಳ್ಳಿ ಶಾಸಕರೂ, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಸಮಾಜದ ಸದಸ್ಯರು, ಕೃತಜ್ಞತೆ ಸಲ್ಲಿಸಿದ್ದಾರೆ.