ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶ್ರೀ ನಾರಾಯಣ ಗುರು ವಿಚಾರ ವೇದಿಕೆ(Shri Narayan Guru Vichara Vedike)ಯು ನಗರದ ಸೈನ್ಸ್ ಫೀಲ್ಡ್’ನಲ್ಲಿ ಭಾನುವಾರ ಆಯೋಜಿಸಿದ್ದ ಬೃಹತ್ ಹಕ್ಕೊತ್ತಾಯ ಸಮಾವೇಶದಲ್ಲಿ ಸರ್ಕಾರದ ಮುಂದೆ ಐದು ಪ್ರಮುಖ ಬೇಡಿಕೆಗಳನ್ನು ಇಟ್ಟಿದೆ.
READ | ಶಿಮುಲ್ ವ್ಯಾಪ್ತಿಯ ಮೂರು ಜಿಲ್ಲೆಗಳಲ್ಲಿ ಹಾಲು ಖರದಿ ದರದಲ್ಲಿ ಏರಿಕೆ
ಬೇಡಿಕೆಗಳೇನು?
- ಪ್ರವರ್ಗ 2ಎ ಮೀಸಲಾತಿ ರಕ್ಷಿಸಿ, ಕಾಂತರಾಜ್ ಆಯೋಗದ ವರದಿ ಜಾರಿಗೊಳಿಸಬೇಕು.
- ಸಮಾಜದ ಅಭಿವೃದ್ಧಿಗಾಗಿ ನಿಗಮ ಮಂಡಳಿ ರಚಿಸಿ ಕನಿಷ್ಠ ರೂ. 500 ಕೋಟಿ ಅನುದಾನ ಮೀಸಲಿಡಬೇಕು.
- ಶರಾವತಿ, ಸಾವೇಹಕ್ಲು ಇನ್ನಿತರೆ ಮುಳುಗಡೆ ಸಂತ್ರಸ್ಥರಿಗೆ ವಸತಿ ಕಲ್ಪಿಸಿಕೊಡಬೇಕು.
- ಶ್ರೀ ಕ್ಷೇತ್ರ ಸಿಂಗಂಧೂರು ಚೌಡೇಶ್ವರಿ ದೇವಸ್ಥಾನದ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪ ನಿಲ್ಲಿಸಬೇಕು.
- ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಹೆಸರಿಡಬೇಕು.
ಯಾರು ಏನು ಮಾತನಾಡಿದರು?
ರಾಜ್ಯದಲ್ಲಿ ಈಡಿಗ ಸಮಾಜದ ಸುಮಾರು 30 ಲಕ್ಷ ಜನಸಂಖ್ಯೆ ಇದೆ. ಆದರೆ, ಕಾಂತರಾಜ್ ವರದಿಯಲ್ಲಿ ಬರೀ 13 ಲಕ್ಷ ಎಂದು ದಾಖಲಿಸಲಾಗಿದೆ. ಇದನ್ನು ಬದಲಿಸಬೇಕು. ಶೇ.15ರ 2ಎ ಮೀಸಲಾತಿಗೆ ಬೇರೆಯ ಜಾತಿಗಳನ್ನು ಸೇರಿದರೆ ನಮಗೆ ಅನ್ಯಾಯವಾಗಲಿದೆ. ಇದಕ್ಕೆ ನಮ್ಮ ಪೂರ್ಣ ವಿರೋಧವಿದೆ.
– ಸತ್ಯಜೀತ್ ಸುರತ್ಕಲ್, ಅಧ್ಯಕ್ಷ, ಶ್ರೀ ನಾರಾಯಣಗುರು ವಿಚಾರ ವೇದಿಕೆಯ ರಾಜ್ಯ ಸಮಿತಿಈಡಿಗ ಸಮಾಜಕ್ಕೆ ಪ್ರತ್ಯೇಕ ನಿಗಮ ಘೋಷಿಸಿದ್ದು ಶೀಘ್ರವೇ ಅಧಿಸೂಚನೆ ಹೊರಡಿಸಿ, ಬಜೆಟ್ ನಲ್ಲಿ ಅನುದಾನ ಮೀಸಲಿಡಲಾಗುವುದು. ಬೇರೆಯವರಿಗೆ 2ಎಗೆ ಸೇರಿಸಿದರೆ ನಮಗೇನೂ ತೊಂದರೆ ಆಗದು. ಇದನ್ನು ಸಂಬಂಧಪಟ್ಟವರಿಗೆ ಕೇಳಿ ಮಾಹಿತಿ ಪಡೆದಿದ್ದೇವೆ. ಯಾರೂ ಭಯಪಡಬೇಕಿಲ್ಲ
– ಹರತಾಳು ಹಾಲಪ್ಪ, ಶಾಸಕ, ಸಾಗರಹಕ್ಕುಗಳಿಗಾಗಿ ಹೋರಾಟ ಅಗತ್ಯ. ಎಲ್ಲರೂ ಒಗ್ಗೂಡಬೇಕಿದೆ. ಐದು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸರ್ಕಾರವೇ ನಮ್ಮ ಬಳಿ ಬರಬೇಕು. ನಾವು ಅಲ್ಲಿಗೆ ಹೋಗುವುದಲ್ಲ. ಅದಕ್ಕಾಗಿ ಅಗತ್ಯ ಹೆಜ್ಜೆ ಇಡಬೇಕು.
– ಶ್ರೀ ಅರುಣಾನಂದ ಸರಸ್ವತಿ ಸ್ವಾಮೀಜಿ, ನಿಪ್ಪಾಣಿಯ ಓಂಶಕ್ತಿ ಮಠನಾವುಗಳು ನಮ್ಮ ಬೇಡಿಕೆಗಳನ್ನು ಹಕ್ಕಿನಿಂದ ಕೇಳಬೇಕು. ತಮಗಾದ ಅನ್ಯಾಯವನ್ನು ವಿರೋಧಿಸಬೇಕು. ಇಲ್ಲವಾದರೆ, ನಮ್ಮ ದನಿಗೆ ಮಾನ್ಯತೆ ಸಿಗುವುದಿಲ್ಲ. ಎಲ್ಲರೂ ಒಂದಾಗಿ ಹೋರಾಟ ರೂಪಿಸೋಣ.
– ಶ್ರೀ ರೇಣುಕಾನಂದ ಸ್ವಾಮೀಜಿ, ನಿಟ್ಟೂರಿನ ಶ್ರೀನಾರಾಯಣಗುರು ಮಹಾಸಂಸ್ಥಾನ
ಶ್ರೀಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಎಸ್.ರಾಮಪ್ಪ, ಪ್ರಮುಖರಾದ ಮಾಜಿ ಶಾಸಕ ಜಿ.ಡಿ. ನಾರಾಯಣಪ್ಪ, ರಾಜನಂದಿನಿ, ಕಲಗೋಡು ರತ್ನಾಕರ್ ಸೇರಿದಂತೆ ಸಮಾಜದ ಪ್ರಮುಖರು ಇದ್ದರು.