Police raid | ದಿಢೀರ್ ದಾಳಿ ನಡೆಸಿ 12 ಜನರನ್ನು ವಶಕ್ಕೆ ಪಡೆದ‌ ಪೊಲೀಸ್

police

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕಡೇಕಲ್ ಲಕ್ಕಿನಕೊಪ್ಪ ನಡುವಿನ ಅರಣ್ಯಕ್ಕೆ ಹೋಗುವ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ 10 ರಿಂದ 12 ಜನರು ಪರವಾನಗಿ ಇಲ್ಲದೇ ಕಾನೂನು ಬಾಹೀರವಾಗಿ ಹಣವನ್ನು ಪಣಕ್ಕಿಟ್ಟು ಇಸ್ಪೀಟು ಜೂಜಾಟ ಆಡುತ್ತಿರುವ ಬಗ್ಗೆ‌ ಬಂದ ಖಚಿತ ಮಾಹಿತಿಯ ಮೇರೆಗೆ 12 ಜನರನ್ನು ಶನಿವಾರ ವಶಕ್ಕೆ ಪಡೆಯಲಾಗಿದೆ.

READ | ಶಿವಮೊಗ್ಗದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೊಮ್ಮೆ ನೀವು ಬರಲೇಬೇಕು, ಇಲ್ಲಿನ 8 ವಿಶೇಷಗಳೇನು?

ತುಂಗಾನಗರ ಪಿಐ ಮಂಜುನಾಥ್ ಮಾರ್ಗದರ್ಶನದಲ್ಲಿ, ಪಿಎಸ್.ಐ ರಾಜುರೆಡ್ಡಿ ಬೆನ್ನೂರು ಸಿಬ್ಬಂದಿಯ ತಂಡವು ದಾಳಿ ನಡೆಸಿದೆ.‌ ಜೂಜಾಟದಲ್ಲಿ ಪಣವಾಗಿ ಇಟ್ಟ ₹1,53,970 ನಗದು ವಶ ಪಡಿಸಿಕೊಂಡು ಆರೋಪಿತರ ವಿರುದ್ಧ ಕಲಂ 87 ಕೆಪಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
15 ಲೀಟರ್ ಮದ್ಯ‌ ಸೀಜ್
ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಂತೇಕಡೂರು ಗ್ರಾಮದಲ್ಲಿ ಅಂಗಡಿಯ ಮುಂದಿನ ಕಟ್ಟೆಯ ಮೇಲೆ ವ್ಯಕ್ತಿಯೊಬ್ಬ ಪರವಾನಿಗಿ ಇಲ್ಲದೇ ಮದ್ಯವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಅಂದಾಜು ₹6489 ಮೌಲ್ಯದ ಒಟ್ಟು 15 ಲೀಟರ್ 840 ಮಿಲಿ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.

error: Content is protected !!