ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯ (Karnataka state government) ತೀರ್ಮಾನದಂತೆ ಆ.1ರಿಂದ ನಂದಿನ ಹಾಲು (nandini milk) ಮತ್ತು ಹಾಲಿನ ಉಪ ಉತ್ಪನ್ನಗಳ ಬೆಲೆ ಏರಿಕೆ ಜಾರಿಯಾಗಲಿದೆ ಎಂದು ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟ(Shimul)ದ ಅಧ್ಯಕ್ಷ ಶ್ರೀಪಾದರಾವ್ ನಿಸರಾಣಿ (SripadaRao Nisarani) ತಿಳಿಸಿದರು.
READ | ಬೆಲೆ ಏರಿಕೆಯ ಮುನ್ನಾ ದಿನ ಶಿವಮೊಗ್ಗದಲ್ಲಿ ಹಾಲಿನ ತಾತ್ಕಾಲಿಕ ಬಿಕ್ಕಟ್ಟು, ಕಾರಣವೇನು?
ಸೋಮವಾರ ಒಕ್ಕೂಟದ ಆಡಳಿತ ಮಂಡಳಿ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲು ಉತ್ಪಾದಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಹಾಲಿನ ದರ ಏರಿಕೆಗೆ ನಿರ್ಧಾರ ಕೈಗೊಂಡಿದ್ದು, ಅದರಂತೆ ಮಂಡಳಿಯು ಸೋಮವಾರ ಸಭೆ ನಡೆಸಿ ಆ.1ರಿಂದ ಹಾಲು ದರ ಏರಿಕೆ ಜಾರಿಗೊಳಿಸಲು ನಿರ್ಧರಿಸಿದೆ ಎಂದು ತಿಳಿಸಿದರು.
ಕ್ಷೀರ ಭಾಗ್ಯ ಯೋಜನೆಗೆ 1.70 ಲಕ್ಷ ಕೆಜಿ ಹಾಲಿನ ಪೌಡರ್ ಸರಬರಾಜು ಮಾಡಲಾಗುತ್ತಿದೆ. ’ನಂದಿನಿ’ ಬ್ರಾಂಡ್ ಹೆಸರಿನಲ್ಲಿ ಉತ್ಕೃಷ್ಟ ಹಾಲು ಮತ್ತು ಉಪ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.
– ಶ್ರೀಪಾದರಾವ್ ನಿಸರಾಣಿ, ಅಧ್ಯಕ್ಷ, ಶಿಮೂಲ್
ಹಾಲು, ಮೊಸರಿನ ದರ ಹೆಚ್ಚಳ
ಆ.1ರಿಂದ ಪರಿಷ್ಕೃತ ದರ ಜಾರಿಯಾಗಲಿದ್ದು, ಇದುವರೆಗೂ ಹಾಲು ಸಂಗ್ರಹ ಸಹಕಾರ ಸಂಘಗಳಿಗೆ ನೀಡಲಾಗುತ್ತಿದ್ದು, ಪ್ರತಿ ಕೆಜಿಗೆ ಹಾಲಿನ ದರ ₹33.71 ಇದ್ದು, ಇದು ಈಗ ₹36.83 ಗಳಿಗೆ ಏರಿಕೆಯಾಗಲಿದೆ. ಅದರಂತೆ ಹಾಲು ಉತ್ಪಾದಕರಿಗೆ ನೀಡಲಾಗುತ್ತಿದ್ದ ಪ್ರತಿ ಲೀ.ಗೆ ₹31.85 ಗಳು, %34.97 ಗೆ ಹಚ್ಚಳವಾಗಲಿದೆ. ಹಾಲು ಮತ್ತು ಮೊಸರು ಹಾಲಿನ ದರ ಪ್ರತಿ ಲೀ.ಗೆ ₹3 ಗಳು ಹೆಚ್ಚಳವಾಗಲಿದ್ದು ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ಮತ್ತು ಹೈನುಗಾರಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಹಾಲಿನ ದರ ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲೇ ಕಡಿಮೆ ಬೆಲೆ
ಇಡೀ ದೇಶದ ಹೆಚ್ಚಿನ ಹಾಲು ಉತ್ಪಾದಿಸುವ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕ ರಾಜ್ಯದಲ್ಲಿ ಮಾತ್ರವೆ ಹಾಲಿನ ದರ ಕಡಿಮೆ ಇದೆ. ಸಾಮಾನ್ಯ ಹಾಲಿನ ದರ ಲೀ ₹39 ಗಳಿಂದ 42 ರೂ.ಗಳಿಗೆ, ಟೋನ್ಸ್ ಮಿಲ್ಕ್ ₹46 ರೂ.ಗಳಿಂದ ₹49 ಗಳಿಗೆ ಮತ್ತು ಮೊಸರು, ಲಸ್ಸಿ ಉತ್ಪನ್ನಗಳ ಬೆಲೆ ಕೂಡ ₹3 ಗಳಿಗೆ ಹೆಚ್ಚಳವಾಗಲಿದೆ ಎಂದು ತಿಳಿಸಿದರು.
ಬ್ಯಾಂಕ್ ನ ಉಪಾಧ್ಯಕ್ಷ ಎಚ್.ಕೆ.ಬಸಪ್ಪ ನಿರ್ದೇಶಕರಾದ ಆನಂದ್, ಸಿ.ವೀರಭದ್ರಬಾನು , ಬಿ.ಜಿ. ಬಸವರಾಜಪ್ಪ ವಿದ್ಯಾಧರ, ಕೆ.ಎ. ತಾರಾನಾಥ್, ಕೆ.ಎನ್. ಸೋಮಶೇಖರಪ್ಪ ಜಿ.ಪಿ ಯಶವಂತರಾಜು, ಎಂ.ಎನ್ ಸತೀಶ್, ಎನ್ ಡಿ ಹರೀಶ್, ದಿನೇಶ್, ಕೆ.ಪಿ ರುದ್ರೇಗೌಡ, ಎನ್ ಹೆಚ್ ಭಾಗ್ಯ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ ಶೇಖರ್ ಉಪಸ್ಥಿತರಿದ್ದರು.
Shimul | ರೈತರಿಗೆ ಶಿಮುಲ್ ಗುಡ್ ನ್ಯೂಸ್, ಹಾಲು ಖರೀದಿ ದರ ಹೆಚ್ಚಳ, ಗ್ರಾಹಕರಿಗೆ ಬೆಲೆ ಏರಿಕೆ ಶಾಕ್