ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪ್ರಸಕ್ತ ಮಳೆಗಾಲದಲ್ಲಿ ಮಲೆನಾಡಿನ (Malenadu) ಪ್ರದೇಶಗಳಲ್ಲಿ ಭಾರಿ ಮಳೆ ಸುರಿದ ಹಿನ್ನೆಲೆ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಕೊಡಚಾದ್ರಿ ಪ್ರವೇಶವನ್ನು ನಿಷೇಧಿಸಿದೆ.
READ | ಶಿವಮೊಗ್ಗದ ಪ್ರವಾಸಿ ತಾಣಗಳಲ್ಲಿ ಸೆಲ್ಫಿಗೆ ಬ್ರೇಕ್, ಎಲ್ಲೆಲ್ಲಿ ನಿಯಮ ಅನ್ವಯ?
ಜುಲೈ 30 ರಿಂದ ಮುಂದಿನ ಆದೇಶದವರೆಗೆ ವಾಹನದಲ್ಲಿ ತೆರಳುವುದು ಹಾಗೂ ಚಾರಣ ಮಾಡುವುದನ್ನು ಸಂಪೂರ್ಣ ನಿಷೇಧಿಸಿ ಒಂದೇ ಹೊರಡಿಸಿದೆ.
ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ಆದೇಶವನ್ನು ಹೊರಡಿಸಲಾಗಿದ್ದು, ಕಟ್ಟಿನ ಹೊಳೆ ಮೂಲಕ ಕೊಡಚಾದ್ರಿಗೆ ತೆರಳುವ ಜೀಪ್ ಮುಂತಾದ ವಾಹನಗಳು ಹಾಗೂ ವಿವಿಧ ಮಾರ್ಗದ ಚಾರಣದಲ್ಲಿ ಕೊಡಚಾದ್ರಿಗೆ ತೆರಳುವುದನ್ನು ನಿಷೇಧಿಸಿದ್ದು, ಸಹಕರಿಸುವಂತೆ ಕೋರಲಾಗಿದೆ.
ಜೀಪ್ ಮಾಲೀಕರು, ಚಾಲಕರಿಗೆ ಸಂಕಷ್ಟ
ನಿಟ್ಟೂರು, ಸಂಪೆಕಟ್ಟೆ, ಕಟ್ಟಿನಹೊಳೆಯಿಂದ ಕೊಡಚಾದ್ರಿ ಗೆ ಜೀಪ್ ನಲ್ಲಿ ಪ್ರವಾಸವನ್ನು ಕಳೆದುಕೊಂಡು ಹೋಗುವ ಜೀಪ್ ಮಾಲೀಕರು ಮತ್ತು ಚಾಲಕರ ಜೀವನ ನಿರ್ವಹಣೆಗೆ ಪೆಟ್ಟುಬಿದ್ದಂತಾಗಿದೆ.