ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣದ (Ragigudda stone pelting case) ವಿಚಾರವಾಗಿ ಜಿಲ್ಲಾ ಬಿಜೆಪಿಯು ಆಯೋಜಿಸಿದ್ದ ಪ್ರತಿಭಟನಾ ಸಭೆಯ ಮೂಲಕ ಪ್ರಮುಖ ಮೂರು ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಂದಿಟ್ಟಿದೆ. ಅವುಗಳನ್ನು ಪೂರೈಸಬೇಕೆಂದು ಆಗ್ರಹಿಸಲಾಗಿದೆ.
ನಗರದ ಬಾಲರಾಜ್ ಅರಸ್ ರಸ್ತೆಯ ಮಥುರಾ ಪ್ಯಾರಡೈಸ್ ಹೋಟೆಲ್ ಎದುರು ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಸರ್ಕಾರದ ಹಿಂದೂ ಧೋರಣೆಯನ್ನು ಖಂಡಿಸಿ ಬೃಹತ್ ಪ್ರತಿಟಭನಾ ಸಭೆಯಲ್ಲಿಬಪಕ್ಷದ ಪ್ರಮುಖರು ಮಾತನಾಡಿದರು.
READ | ಶಿವಮೊಗ್ಗ-ಶಿಕಾರಿಪುರ ನೂತನ ರೈಲ್ವೆ ಮಾರ್ಗ, ಭರದಿಂದ ಸಾಗಿದೆ ಟ್ರ್ಯಾಕ್ ಕಾಮಗಾರಿ
ಬಿಜೆಪಿಯ ಬೇಡಿಕೆಗಳೇನು?
- ರಾಗಿಗುಡ್ಡ ಗಲಭೆಯಲ್ಲಿ ಭಾಗಿಯಾದವರ ವಿರುದ್ದ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಸರ್ಕಾರ ಎನ್ಐಎ ತನಿಖೆಗೆ ವಹಿಸಬೇಕು.
- ಕೆಲವು ಹಿಂದೂಗಳ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದು, ಅವುಗಳನ್ನು ಹಿಂಪಡೆದು ಜೈಲಿಗೆ ಹಾಕಿದವರನ್ನು ತಕ್ಷಣ ಬಿಡುಗಡೆಗೊಳಿಸಬೇಕು.
- ಘಟನೆಯ ಹಿಂದೆ ನಿಷೇಧಿತ ಸಂಘಟನೆಗಳಾದ ಎಸ್.ಡಿ.ಪಿಐ, ಪಿಎಫ್.ಐ ಕಾರ್ಯಕರ್ತರೂ ಭಾಗಿಯಾಗಿರುವ ಶಂಕೆ ಇದೆ. ಕಲ್ಲು ತೂರಾಟ ದೂರಾಲೋಚನೆಯೊಂದಿಗೆ ನಡೆದ ಕೃತ್ಯ. ಹೀಗಾಗಿ, ಘಟನೆ ಪೂರ್ಣ ತನಿಖೆ ನಡೆಯಲೇಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು.
ಯಾರು ಏನು ಹೇಳಿದರು?
- ಮತ್ತೊಮ್ಮೆ ಮೋದಿ
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಮತ್ತೊಮ್ಮೆ ರಾಗವೇಂದ್ರ ಸಂಸದರಾಗುತ್ತಾರೆ. ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ. ಹಿಂದೂ ಸಮಾಜ ರಕ್ಷಣೆ ಮಾಡುವ ಸರ್ಕಾರ ಬರುತ್ತದೆ. ರಾಘವೇಂದ್ರ ಲೋಕಸಭೆ ಸದಸ್ಯರಾದ ನಂತರ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಜಿಲ್ಲೆಯ ಆಗಿವೆ. ಮುಸ್ಲಿಮರನ್ನು ಅತಿಯಾಗಿ ತುಷ್ಟೀಕರಣ ಮಾಡುವ ಸಿದ್ದರಾಮಯ್ಯರ ಪುತ್ರ ಹಾಗೂ ಡಿ.ಕೆ.ಶಿವಕುಮಾರ್ ಸೋದರನ ಮೇಲೆ ಮುಸ್ಲಿಮರು ಹಲ್ಲೆ ಮಾಡಿ ಕೊಲೆ ಮಾಡಿದ್ದರೂ ಬೆಂಬಲಿಸುತ್ತಿದ್ದರೆ? ಎಂದು ಖಾರವಾಗಿ ಪ್ರಶ್ನಿಸಿದರು. - ಗಲಭೆ ಬಿಂದಿನ ಆಲೋಚನೆ ದೊಡ್ಡದು
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ರಾಗಿಗುಡ್ಡದಲ್ಲಿ ನಡೆದ ಗಲಭೆ ಸಣ್ಣದಿರಬಹುದು. ಆದರೆ, ಇದರ ಹಿಂದಿನ ದುರಾಲೋಚನೆ ದೊಡ್ಡದು. ಇದನ್ನು ಸಮರ್ಥಿಸಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು. ಕಾನೂನು ಸುವ್ಯವಸ್ಥೆ ಕಾಪಾಡಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಮಾನತು ಮಾಡಿದ್ದು, ಖಂಡನೀಯ ಎಂದರು. - ಮುಸ್ಲಿಂ ತುಷ್ಟೀಕರಣ ನೀತಿ ವಿರುದ್ಧ ಗರಂ
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಮುಸಲ್ಮಾನ ತುಷ್ಟೀಕರಣ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ. ಆತಂಕವಾದಿಗಳಿಂದ ಶಿವಮೊಗ್ಗದ ಮೇಲೆ ದಾಳಿ ನಡೆಯುತ್ತಿದೆ. ಹಿಂದೂಗಳ ರಕ್ಷಣೆ ಬೇಕು ಎಂದು ಒತ್ತಾಯಿಸಿದರೆ ಬಿಜೆಪಿ ಪಕ್ಷವನ್ನು ಕೋಮುವಾದಿ ಎನ್ನಲಾಗುತ್ತಿದೆ ಎಂದು ಗರಂ ಆದರು. - ಸರ್ಕಾರವನ್ನು ಎಚ್ಚರಿಸಬೇಕಿದೆ
ಶಾಸಕ ಬಿ.ವೈ ವಿಜಯೇಂದ್ರ ಮಾತನಾಡಿ, ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ತುಷ್ಟೀಕರಿಸುತ್ತಿದೆ. ರಾಜ್ಯ ಸರ್ಕಾರವನ್ನು ಎಚ್ಚರಿಸುವ ಕೆಲಸ ಆಗಬೇಕಿದೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ಮಂತ್ರಿಗಳು ಹಗುರವಾದ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ನಡವಳಿಕೆ ಇಂದು ನಿನ್ನೆಯದು ಅಲ್ಲ ಇದು. ದೇಶದ್ರೋಹಿ ಚಟುವಟಿಕೆಗಳನ್ನು ನಡೆಸುತ್ತಿರುವವರನ್ನು ಗಡಿಪಾರು ಮಾಡಿದರೆ ಸಾಲದು ಅವರ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್ ನಾಯಕರನ್ನು ಗಡಿಪಾರು ಮಾಡಬೇಕೆಂದರು. - ಗಲಭೆ ಉದ್ದೇಶವೇನು?
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಹಿಂದೂಗಳ ಜೀವನಕ್ಕೆ ಅಡಚಣೆಯಾದ ಅವರ ರಕ್ಷಣೆಗೆ ಬಿಜೆಪಿ ಸದಾ ಸಿದ್ದವಾಗಿದೆ. ರಾಗಿಗುಡ್ಡದ ಗಲಭೆಯ ಉದ್ದೇಶ ಏನು? ಗಲಭೆಯ ಹಿಂದಿನ ಶಕ್ತಿ ಯಾವುದು? ಜಿಲ್ಲೆಯ ಜನರಿಗೆ ಗೊತ್ತಾಗಬೇಕು. ಇದರ ಹಿಂದೆ ಎಸ್.ಡಿಪಿಐ, ಪಿಎಫ್.ಐ ಸಂಘಟನೆಯ ಕೈವಾಡವಿದೆ ಎಂದು ಆರೋಪಿಸಿದರು.
ಶಾಸಕರಾದ ಭಾರತಿ ಶೆಟ್ಟಿ, ಡಿ.ಎಸ್ ಅರುಣ್, ಪ್ರಮುಖರಾದ ಗಿರೀಶ್ ಪಟೇಲ್, ಆರ್.ಕೆ ಸಿದ್ದರಾಮಣ್ಣ, ಮೋನಪ್ಪ ಭಂಡಾರಿ, ಎಸ್. ದತ್ತಾತ್ರಿ, ಸತೀಶ್ ಬೇಗುವಳ್ಳಿ, ಬಿ.ಕೆ.ಶ್ರೀನಾಥ್ ಉಪಸ್ಥಿತರಿದ್ದರು.