ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 2022ರಲ್ಲಿ ಪ್ರಕಟವಾದ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಶಿವಮೊಗ್ಗ ಕರ್ನಾಟಕ ಸಂಘದ ಪುಸ್ತಕ ಬಹುಮಾನ ಘೋಷಣೆ ಮಾಡಿದೆ.
ಶಿವಮೊಗ್ಗ ಕರ್ನಾಟಕ ಸಂಘ (shivamogga Karnataka sangha) ವು 2022ನೇ ಸಾಲಿನ ಪುಸ್ತಕ ಬಹುಮಾನಗಳನ್ನು ಈ ಕೆಳಕಂಡ ಕನ್ನಡ ಸಾಹಿತ್ಯ ಪ್ರಕಾರಗಳಿಗೆ ಘೋಷಿಸಿದೆ. ವಿಜೇತರಿಗೆ ತಲಾ ₹10,000 ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು. ಪುಸ್ತಕ ಬಹುಮಾನ 2022ರ ಸಮಾರಂಭವು ನ.26ರಂದು ಕರ್ನಾಟಕ ಸಂಘದ ಹಸೂಡಿ ವೆಂಕಟಶಾಸ್ತ್ರಿ ಸಾಹಿತ್ಯ ಭವನ(Sahitya Bhavana)ದಲ್ಲಿ ಹಮ್ಮಿಕೊಳ್ಳಲಾಗಿದೆ.
READ | ಶಿವಮೊಗ್ಗದ ಕರ್ನಾಟಕ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ, ಯಾರಿಗೆಲ್ಲ ಪ್ರಶಸ್ತಿ ಲಭಿಸಿದೆ, ಇಲ್ಲಿದೆ ಪೂರ್ಣ ಮಾಹಿತಿ
ಪ್ರಶಸ್ತಿಗೆ ಆಯ್ಕೆಯಾದ ಪುಸ್ತಕಗಳು
1. ಕುವೆಂಪು (ಕಾದಂಬರಿ): ಎತ್ತರ: ಎಚ್.ಬಿ. ಇಂದ್ರಕುಮಾರ್
2. ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ (ಅನುವಾದ): ಯೂರಿಪಿಡೀಸ್ ಮೂರು ನಾಟಕಗಳು: ಶ್ರೀ ಮಾಧವ ಚಿಪ್ಪಳಿ
3. ಎಂ.ಕೆ. ಇಂದಿರಾ (ಮಹಿಳಾ ಸಾಹಿತ್ಯ): ಲೋಕವೇ ತಾನಾದ ಬಳಿಕ: ಡಾ. ಮುಮ್ತಾಜ್ ಬೇಗಂ
4. ಶ್ರೀ ಪಿ. ಲಂಕೇಶ್ (ಮುಸ್ಲಿಂ ಬರಹಗಾರರು): ಕಡಲು ನೋಡಲು ಹೋದವಳು: ಫಾತಿಮಾ ರಲಿಯಾ
5. ಡಾ. ಜಿ. ಎಸ್. ಶಿವರುದ್ರಪ್ಪ (ಕವನ ಸಂಕಲನ): ಬೇಲಿಯ ಗೂಟದಲ್ಲೊಂದು ಚಿಟ್ಟೆ: ಡಾ. ನಾ. ಮೊಗಸಾಲೆ
6. ಡಾ. ಹಾ.ಮಾ. ನಾಯಕ (ಅಂಕಣ ಬರಹಗಾರರು): ಉರುಳಿದ ಕಟ್ಟಡ ಮರಳಿದ ನೆನಪು: ಶಶಿಧರ ಹಾಲಾಡಿ
7. ಡಾ. ಯು.ಆರ್. ಅನಂತಮೂರ್ತಿ (ಸಣ್ಣ ಕಥಾ ಸಂಕಲನ): ಹೊಗೆಯ ಹೊಳೆಯಿದು ತಿಳಿಯದು: ಡಾ. ಚಿದಾನಂದ ಸಾಲಿ
8. ಡಾ. ಕೆ. ವಿ. ಸುಬ್ಬಣ್ಣ (ನಾಟಕ): ಜೋಡಿ ನಾಟಕಗಳು: ಡಾ. ಬಸವರಾಜ ಸಬರದ
9. ಶ್ರೀ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ (ಪ್ರವಾಸ ಸಾಹಿತ್ಯ): ಅಲೆಮಾರಿಯ ಡೈರಿ: ಸಂತೋಷ ಕುಮಾರ ಮೆಹೆಂದಳೆ
10. ಶ್ರೀ ಹಸೂಡಿ ವೆಂಕಟಶಾಸ್ತ್ರಿ (ವಿಜ್ಞಾನ ಸಾಹಿತ್ಯ): ಬೆಳೆ ರೋಗಗಳು, ಕೀಟಗಳು ಮತ್ತು ಅವುಗಳ ನಿರ್ವಹಣೆ: ಡಾ. ಸುಕನ್ಯಾ ಸೊನಗಹಳ್ಳಿ
11. ಡಾ.ನಾ. ಡಿಸೋಜ (ಮಕ್ಕಳ ಸಾಹಿತ್ಯ): ಜಾಣ ಪ್ರಶ್ನೆ: ಕೊಳ್ಳೇಗಾಲ ಶರ್ಮ
12. ಡಾ.ಎಚ್.ಡಿ. ಚಂದ್ರಪ್ಪಗೌಡ (ವೈದ್ಯ ಸಾಹಿತ್ಯ): ಪಾಶ್ರ್ವವಾಯುವಿನಿಂದ ಚೈತನ್ಯದೆಡೆಗೆ: ಡಾ. ಪಿ.ಎಂ.ಸೂರ್ಯನಾರಾಯಣ ಶರ್ಮ