Murder | ಮದ್ಯ ಸೇವನೆಗೆ ಆಹ್ವಾನಿಸಿ ಹಾಡುಹಗಲೇ ಬರ್ಬರ ಹತ್ಯೆ‌, ಘಟನೆ ಮೂವರು ಅರೆಸ್ಟ್

Murder

 

 

ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ನಗರದ ಬಿ.ಎಚ್.ರಸ್ತೆಯ (BH Road) ವೈನ್ ಸ್ಟೋರ್ ವೊಂದಕ್ಕೆ ಕರೆಸಿಕೊಂಡು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬುಧವಾರ ನಡೆದಿದೆ. ಹತ್ಯೆಯ ಬೆನ್ನಲ್ಲೇ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

READ | ಶಿವಮೊಗ್ಗ ಆರೋಗ್ಯ ಇಲಾಖೆಯಿಂದ ಕೋವಿಡ್ 19 ಮಾರ್ಗಸೂಚಿ ಬಿಡುಗಡೆ, ಏನೆಲ್ಲ ನಿಯಮಗಳು ಅನ್ವಯ?

ಬೊಮ್ಮನಕಟ್ಟೆ ಹಿರಿಯೂರು ನಿವಾಸಿ ಆಟೋ‌ ಚಾಲಕ ಹೇಮಂತ್(40) ಕೊಲೆಯಾದ ವ್ಯಕ್ತಿ. ಕೊಲೆ ಕುರಿತು ಮಾಹಿತಿ ಲಭಿಸಿದ ಬೆನ್ನಲ್ಲೇ ಕಾರ್ಯಾಚರಣೆ ಚುರುಕುಗೊಳಿಸಿದ ಪೊಲೀಸರು ಬೊಮ್ಮನಕಟ್ಟೆಯ ಸತ್ಯಾನಂದ್, ಮುಬಾರಕ್(26), ಖಲೀಲ್ (20) ಎಂಬುವವರನ್ನು ಬಂಧಿಸಲಾಗಿದೆ ಎಂದು ಎಸ್.ಪಿ.‌ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಮದ್ಯ ಸೇವನೆಗೆ ಆಹ್ವಾನ
ವೈನ್ ಸ್ಟೋರ್ ಗೆ ಹೇಮಂತ್ ಎಂಬಾತನನ್ನು ಕರೆಸಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಹೇಮಂತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮದ್ಯದಂಗಡಿ ಮಾಲೀಕನು ನೀಡಿದ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ನಗರದ ಸಿಪಿಐ ಶ್ರೀಶೈಲ ಕುಮಾರ್, ಹಳೆ ನಗರ ಠಾಣೆ ಪಿಎಸ್.ಐ ಶರಣಪ್ಪ ಹಡ್ರಿಗಲ್, ಸಿಬ್ಬಂದಿ ಸಿಸಿ ಟಿವಿ ಕ್ಯಾಮರಾ ಆಧರಿಸಿ ಆರೋಪಿಗಳ ಬೆನ್ನು ಹತ್ತಿದ್ದಾರೆ. ಶಂಕರ ಚಿತ್ರಮಂದಿರದ‌ ಸಮೀಪ ಮೂವರನ್ನು ಬಂಧಿಸಿದ್ದಾರೆ. ಮೃತಮ ಪತ್ನಿ ಹಳೆನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಾಲ್ಕು ತಿಂಗಳ ಹಿಂದಿನ ಮರ್ಡರ್ ಕೇಸ್ ಗೆ ಲಿಂಕ್?
ನಾಲ್ಕು ತಿಂಗಳ ಹಿಂದೆ ಬೊಮ್ಮನಕಟ್ಟೆಯ ನಂಜಾಪುರ ರಸ್ತೆಯಲ್ಲಿ ರೌಡಿಶೀಟರ್ ಮುಜಾಹಿದ್ ಎಂಬುವವನನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸಂತೋಷ್ ಎಂಬಾತ ಜೈಲು ಸೇರಿದ್ದಾನೆ.‌ ಈತನ ಅಣ್ಣ ಹೇಮಂತ್ ಈಗ ಕೊಲೆಯಾಗಿದ್ದಾನೆ. ಕೊಲೆ ಪ್ರಕರಣದಲ್ಲಿ ಪೊಲೀಸರು ಮುಜಾಹಿದ್ ನ ಕಿರಿಯ ಸಹೋದರ ಮುಬಾರಕ್ ಮತ್ತು ಚಿಕ್ಕಪ್ಪನ ಮಗ ಖಲೀಲ್ ಎಂಬುವವರನ್ನು ಬಂಧಿಸಿದ್ದಾರೆ.

error: Content is protected !!